ಗೋಲ್ಡ್ ಇಟಿಎಫ್​ಗಳಿಂದ ವರ್ಷದಲ್ಲಿ ಶೇ. 20ರಷ್ಟು ರಿಟರ್ನ್; ಗೋಲ್ಡ್ ಬಾಂಡ್​ಗೂ ಇದಕ್ಕೂ ಏನು ವ್ಯತ್ಯಾಸ

Gold ETFs vs Gold Bonds: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಬಹಳ ಏರಿಕೆ ಆಗುತ್ತಿದೆ. ಬಹಳಷ್ಟು ಜನರು ಚಿನ್ನದ ಮೇಲೆ ಹೂಡಿಕೆ ಮಾಡತೊಡಗಿದ್ದಾರೆ. ಚಿನ್ನದ ಮೇಲೆ ಹೂಡಿಕೆ ಮಾಡಲು ಇರುವ ಆಯ್ಕೆಗಳಲ್ಲಿ ಗೋಲ್ಡ್ ಇಟಿಎಫ್ ಒಂದು. ಭಾರತದಲ್ಲಿ 30,000 ಕೋಟಿ ರೂಗೂ ಹೆಚ್ಚು ಮೊತ್ತದ ಹಣ ಗೋಲ್ಡ್ ಇಟಿಎಫ್​ಗಳಲ್ಲಿ ಹೂಡಿಕೆ ಆಗಿದೆ. ಜನರು ತಮ್ಮ ಹೂಡಿಕೆಯನ್ನು ಯಾವಾಗ ಬೇಕಾದರೂ ಹಿಂಪಡೆಯಲು ಅವಕಾಶ ಕಲ್ಪಿಸಿರುವ ಗೋಲ್ಡ್ ಇಟಿಎಫ್ ಈಗ ಟ್ರೆಂಡಿಂಗ್​ನಲ್ಲಿದೆ.

ಗೋಲ್ಡ್ ಇಟಿಎಫ್​ಗಳಿಂದ ವರ್ಷದಲ್ಲಿ ಶೇ. 20ರಷ್ಟು ರಿಟರ್ನ್; ಗೋಲ್ಡ್ ಬಾಂಡ್​ಗೂ ಇದಕ್ಕೂ ಏನು ವ್ಯತ್ಯಾಸ
ಗೋಲ್ಡ್ ಇಟಿಎಫ್
Follow us
|

Updated on: May 16, 2024 | 11:15 AM

ಚಿನ್ನದ ಮೇಲಿನ ಹೂಡಿಕೆ (Investment in gold) ಈಗ ಲಾಭದಾಯಕ ಮತ್ತು ಸುರಕ್ಷಿತ ಎನಿಸಿದೆ. ಚಿನ್ನದ ಮೇಲೆ ಹೂಡಿಕೆ ಮಾಡಲು ಹಲವು ಮಾರ್ಗಗಳಿವೆ. ಭೌತಿಕ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಗೋಲ್ಡ್ ಬಾಂಡ್, ಗೋಲ್ಡ್ ಫಂಡ್​ಗಳ ಮೇಲೆ ಹೂಡಿಕೆ ಮಾಡಬಹುದು. ಫಂಡ್​ಗಳಲ್ಲಿ ಗೋಲ್ಡ್ ಇಟಿಎಫ್​ಗಳ ಜನಪ್ರಿಯತೆ ಹೆಚ್ಚುತ್ತಿದೆ. ವರ್ಷಕ್ಕೆ ಶೇ. 10ರಿಂದ 20ರಷ್ಟು ರಿಟರ್ನ್ ಕೊಡುತ್ತಿವೆ ಈ ಗೋಲ್ಡ್ ಇಟಿಎಫ್​ಗಳು. 2024ರ ಏಪ್ರಿಲ್ ತಿಂಗಳಲ್ಲಿ ಗೋಲ್ಡ್ ಇಟಿಎಫ್​ಗಳಿಂದ ಹೂಡಿಕೆದಾರರು 396 ಕೋಟಿ ರೂ ಹಣ ಹಿಂಪಡೆದಿದ್ದಾರೆ. ಅಂದರೆ, ಜನರು ತಮ್ಮ ಹೂಡಿಕೆಯನ್ನು ಮಾರಿ ಲಾಭ ಮಾಡಿಕೊಂಡಿದ್ದಾರೆ. 2023ರ ಮಾರ್ಚ್ ತಿಂಗಳ ನಂತರ ಮೊದಲ ಬಾರಿಗೆ ಒಂದು ತಿಂಗಳಲ್ಲಿ ಹೊರಹೋಗಿರುವ ದೊಡ್ಡ ಮೊತ್ತದ ಹೂಡಿಕೆ ಇದಾಗಿದೆ.

ಏನಿದು ಗೋಲ್ಡ್ ಇಟಿಎಫ್?

ಇಟಿಎಫ್ ಎಂದರೆ ಎಕ್ಸ್​​ಚೇಂಜ್ ಟ್ರೇಡೆಡ್ ಫಂಡ್. ಮ್ಯೂಚುವಲ್ ಫಂಡ್ ರೀತಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆಯಾದರೂ ಈ ಫಂಡ್ ಅನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟು ನಡೆಸಬಹುದು. ಗೋಲ್ಡ್ ಇಟಿಎಫ್ ಎಂಬುದು ಚಿನ್ನದ ಬೆಲೆಯ ಪ್ರಕಾರ ರಿಟರ್ನ್ ಕೊಡುವಂತಹ ಫಂಡ್ ಆಗಿರುತ್ತದೆ.

ಇಲ್ಲಿ ಹೂಡಿಕೆದಾರರ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತದೆ. ಇದರಿಂದ ಬಂದ ಲಾಭವು ಹೂಡಿಕೆದಾರರಿಗೆ ವರ್ಗಾವಣೆ ಆಗುತ್ತದೆ. ಹೀಗಾಗಿ, ಚಿನ್ನದ ಬೆಲೆಗೆ ಅನುಗುಣವಾಗಿ ನೀವು ಲಾಭ ಮಾಡುತ್ತೀರಿ.

ಇದನ್ನೂ ಓದಿ: ಭಾರತದ ರಫ್ತು ಮತ್ತು ಆಮದು ಎರಡೂ ಏರಿಕೆ; ಟ್ರೇಡ್ ಡೆಫಿಸಿಟ್ ಹೆಚ್ಚಳಕ್ಕೆ ಕಾರಣವಾದ ಚಿನ್ನ

ಗೋಲ್ಡ್ ಇಟಿಎಫ್​ಗಳಲ್ಲಿ ಇರುವ ಒಟ್ಟು ಹೂಡಿಕೆ ಏಪ್ರಿಲ್ ತಿಂಗಳಲ್ಲಿ 32,789 ಕೋಟಿ ರೂನಷ್ಟಿದೆ. ಕಳೆದ ಒಂದು ವರ್ಷದಿಂದ ಚಿನ್ನದ ಬೆಲೆ ಭರ್ಜರಿಯಾಗಿ ಹೆಚ್ಚಿದೆ. ಚಿನ್ನ ಯಾವಾಗ ಮಾರಿ ಲಾಭ ಮಾಡಬಹುದು ಎಂಬುದು ಆ ಫಂಡ್ ಮ್ಯಾನೇಜರ್​ಗಳ ಕೌಶಲ್ಯಕ್ಕೆ ಬಿಟ್ಟಿದ್ದು. ಹೀಗಾಗಿ, ಕೆಲ ಗೋಲ್ಡ್ ಇಟಿಎಫ್​ಗಳು ಹೆಚ್ಚು ಲಾಭ ತಂದಿವೆ, ಕೆಲ ಇಟಿಎಫ್​ಗಳು ಕಡಿಮೆ ಲಾಭ ತಂದಿವೆ.

ಎಸ್​ಜಿಬಿಗಳಿಗೂ ಗೋಲ್ಡ್ ಇಟಿಎಫ್​ಗೂ ವ್ಯತ್ಯಾಸ ಏನು?

ಆರ್​ಬಿಐನಿಂದ ನಿರ್ವಹಿಸಲಾಗುತ್ತಿರುವ ಸಾವರೀನ್ ಗೋಲ್ಡ್ ಬಾಂಡ್ ಯೋಜನೆ ಬಗ್ಗೆ ಕೇಳಿರಬಹುದು. ಇದೂ ಕೂಡ ಚಿನ್ನದ ಬೆಲೆಯ ಮೇಲೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸುವ ಸ್ಕೀಮ್. ಆದರೆ, ಇದರ ಲಾಕ್ ಇನ್ ಅವಧಿ ಎಂಟು ವರ್ಷ ಇರುತ್ತದೆ.

ಇದನ್ನೂ ಓದಿ: ಮುಂಬೈನವರು ನೋಡಲು ಚಂದ, ಆದರೆ ಬೆಂಗಳೂರಿಗರು…? ನಿಖಿಲ್ ಕಾಮತ್​ಗೆ ಸಿಲಿಕಾನ್ ಸಿಟಿ ಯಾಕೆ ಇಷ್ಟ ಗೊತ್ತಾ? ಝೀರೋಧ ಮುಖ್ಯಸ್ಥರ ನೇರ ಮಾತು

ಆದರೆ, ಗೋಲ್ಡ್ ಇಟಿಎಫ್​ನಲ್ಲಿ ಈ ರೀತಿ ಲಾಕ್ ಇನ್ ಪೀರಿಯಡ್ ಇರುವುದಿಲ್ಲ. ಯಾವಾಗ ಬೇಕಾದರೂ ಹೂಡಿಕೆ ಹಿಂಪಡೆಯಬಹುದು. ಹೀಗಾಗಿ, ಹೂಡಿಕೆದಾರರಿಗೆ ತನ್ನ ರಿಟರ್ನ್ ಮೇಲೆ ಹೆಚ್ಚಿನ ಮಟ್ಟಿಗೆ ಹಿಡಿತ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ