AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್​ಪರ್ಟ್ ದಾಮೋದರನ್ ಆತಂಕ

Market not safe now, says Ashwath Damodaran: ಷೇರು ಮಾರುಕಟ್ಟೆ ಕುಸಿಯುತ್ತಿದೆ. ಅದರೊಂದಿಗೆ ಜೋಡಿತವಾಗಿರುವ ಹೂಡಿಕೆಗಳೂ ಅಸುರಕ್ಷಿತ ಎನಿಸಿವೆ ಎಂದು ಅಶ್ವಥ್ ದಾಮೋದರನ್ ಹೇಳಿದ್ದಾರೆ. ಅಮೆರಿಕದ ಮಾರ್ಕೆಟ್ ವ್ಯಾಲ್ಯುಯೇಶನ್ ಎಕ್ಸ್​ಪರ್ಟ್ ಆಗಿರುವ ದಾಮೋದರನ್ ಪ್ರಕಾರ, ಪಾಸಿವ್ ಫಂಡ್​ಗಳ ಪ್ರಾಬಲ್ಯ ಹೆಚ್ಚಾಗಿರುವುದು ಈ ಕುಸಿತಕ್ಕೆ ಕಾರಣ. ದಾಮೋದರನ್ ಮೊದಲ ಬಾರಿಗೆ ತಮ್ಮ ಜೀವನದಲ್ಲಿ ಚಿನ್ನ ಇತ್ಯಾದಿ ಭೌತಿಕ ಆಸ್ತಿಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರಂತೆ.

ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್​ಪರ್ಟ್ ದಾಮೋದರನ್ ಆತಂಕ
ಅಶ್ವಥ್ ದಾಮೋದರನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 21, 2025 | 2:49 PM

Share

ನವದೆಹಲಿ, ನವೆಂಬರ್ 21: ಷೇರು ಮಾರುಕಟ್ಟೆಯ (stock market) ಇತಿಹಾಸದಲ್ಲೇ ಅತಿ ಹೀನಾಯ ಹಿನ್ನಡೆಯ ಪರ್ವ ಆರಂಭಗೊಂಡಿದೆ ಎಂದು ಕೆಲ ಜಾಗತಿಕ ಮಾರುಕಟ್ಟೆ ತಜ್ಞರು ಕೆಲ ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ. ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದ ಕರ್ತೃ ರಾಬರ್ಟ್ ಕಿಯೋಸಾಕಿಯಂತೂ ಬಾರಿ ಬಾರಿ ಇದನ್ನು ಹೇಳುತ್ತಲೇ ಇದ್ದಾರೆ. ಇದೀಗ ಅಮೆರಿಕದ ಷೇರುಪೇಟೆಯ ವ್ಯಾಲ್ಯುಯೇಶನ್ ಎಕ್ಸ್​ಪರ್ಟ್ ಎನಿಸಿರುವ ಪ್ರೊ| ಅಶ್ವಥ್ ದಾಮೋದರನ್ (Prof. Ashwath Damodaran) ಕೂಡ ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

ಸ್ಕಾಟ್ ಗ್ಯಾಲೋವೇ ಎನ್ನುವ ಯೂಟ್ಯೂಬ್ ವಾಹಿನಿಯ ಪೋಡ್​ಕ್ಯಾಸ್ಟ್​ವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ನ್ಯೂಯಾರ್ಕ್ ಯೂನಿವರ್ಸಿಟಿಯ ಪ್ರೊಫೆಸರ್ ಆಗಿರುವ ಅಶ್ವಥ್ ದಾಮೋದರನ್, ತಾನು ತಮ್ಮ ಹೂಡಿಕೆ ಜೀವನದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಯ ಭೀಕರ ಕುಸಿತದ ಸಾಧ್ಯತೆಯನ್ನು ಎದಿರುನೋಡುತ್ತಿರುವುದಾಗಿ ಹೇಳಿದ್ದಾರೆ.

ಪಾಸಿವ್ ಫಂಡ್​ಗಳಲ್ಲಿ ವಿಪರೀತ ಹೂಡಿಕೆ ಆಗುತ್ತಿರುವುದೇ ಮಾರುಕಟ್ಟೆ ಕುಸಿತಕ್ಕೆ ಕಾರಣ?

ಅಶ್ವಥ್ ದಾಮೋದರನ್ ಅವರು ಮಾರುಕಟ್ಟೆ ಕುಸಿತಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ. ಪಾಸಿವ್ ಫಂಡ್​ಗಳಲ್ಲಿ ಹೂಡಿಕೆ ಮಾಡುತ್ತಿರುವುದು ಮತ್ತು ಇಂಡೆಕ್ಸ್ ಫಂಡ್​ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಮಾರುಕಟ್ಟೆ ರಕ್ಷಣೆಯ ಕೋಟೆ ಒಡೆಯಲು ಒಂದು ಕಾರಣವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಸೇರಿ ಶ್ರೀಮಂತಿಕೆ ಹೆಚ್ಚಿಸಬಲ್ಲ ಮೂರು ಕ್ಷೇತ್ರಗಳಿವು: ಸಿಎ ಕೌಶಿಕ್ ಅನಿಸಿಕೆ

ಮಾರುಕಟ್ಟೆಗಳು ಕುಸಿಯುವುದರ ಜೊತೆಗೆ, ಮಾರುಕಟ್ಟೆ ಪ್ರಭಾವ ಇರುವಂಥವೂ ಕೂಡ ಉರುಳಲಿವೆ. ಮಾರುಕಟ್ಟೆಯ ಪ್ರಭಾವ ಇಲ್ಲದವನ್ನು ಹುಡುಕುವುದೇ ಕಷ್ಟಕರ ಎನಿಸಿದೆ ಎಂದು ಅಮೆರಿಕದ ಈ ಮಾರುಕಟ್ಟೆ ಪರಿಣಿತ ಅಭಿಪ್ರಾಯಪಟ್ಟಿದ್ದಾರೆ.

ಚಿನ್ನ, ಬೆಳ್ಳಿಯಂಥ ಭೌತಿಕ ಆಸ್ತಿಗಳಲ್ಲಿ ಹೂಡಿಕೆ

ಅಶ್ವಥ್ ದಾಮೋದರನ್ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಹೂಡಿಕೆಯನ್ನು ಈಕ್ವಿಟಿಯಿಂದ ಹೊರಗೆ ಮಾಡುತ್ತಿದ್ದಾರಂತೆ. ಕ್ಯಾಷ್​ಗಳನ್ನು ಇರಿಸಿಕೊಳ್ಳುತ್ತಿದ್ದಾರೆ. ಚಿನ್ನ, ಬೆಳ್ಳಿ ಇತ್ಯಾದಿ ಭೌತಿಕ ಆಸ್ತಿಗಳನ್ನು ಖರೀದಿಸುತ್ತಿದ್ದಾರೆ.

ಏನೋ ಕೆಟ್ಟದ್ದು ಬರುತ್ತಿದೆ ಎನ್ನುತ್ತಾರೆ ದಾಮೋದರನ್

ಅಶ್ವಥ್ ದಾಮೋದರನ್ ಪ್ರಕಾರ ಸದ್ಯ ಮಾರುಕಟ್ಟೆಯಲ್ಲಿ ಮೂಲಭೂತ ಅಂಶಗಳು ಸರಿಯಾಗಿಯೇ ಇವೆ. ಆದರೂ ಅವರಿಗೆ ಭಯ ಕಾಡುತ್ತಿದೆ.

‘ಷೇರುಗಳು ಶೇ. 15ರಿಂದ 20ರಷ್ಟು ಏರಿದರೂ, ಮತ್ತು ಬಡ್ಡಿದರಗಳು ಸ್ಥಿರವಾಗಿದ್ದರೂ ಚಿನ್ನದ ಬೆಲೆ ಒಂದು ವರ್ಷದಲ್ಲಿ ಇಷ್ಟು ಅಗಾಧವಾಗಿ ಹೆಚ್ಚಿರುವುದು ಯಾಕೆ? ಈ ಸಂಖ್ಯೆಯನ್ನು ತಾನು ನಂಬುವುದಿಲ್ಲ. ಏನೋ ಕೆಟ್ಟದ್ದು ಬರುತ್ತಿದೆ’ ಎಂದು ಪೋಡ್​ಕ್ಯಾಸ್ಟ್​ನಲ್ಲಿ ಅಶ್ವಥ್ ದಾಮೋದರನ್ ವಿವರಿಸಿದ್ದಾರೆ.

ಇದನ್ನೂ ಓದಿ: ರಾಶಿ ರಾಶಿ ಮ್ಯುಚುವಲ್ ಫಂಡ್​ಗಳ ಮಧ್ಯೆ ಯಾವುದರಲ್ಲಿ ಹೂಡಿಕೆ ಮಾಡುವುದು?

ಮಾರುಕಟ್ಟೆ ಎಷ್ಟು ಬೀಳಬಹುದು?

ಅಶ್ವಥ್ ದಾಮೋದರನ್ ಪ್ರಕಾರ, ಷೇರು ಮಾರುಕಟ್ಟೆ ಎರಡು ರೀತಿಯಲ್ಲಿ ಕುಸಿಯಬಹುದು. ಒಂದು, ಅದು ಅಲ್ಪಾವಧಿಯಲ್ಲೇ ಶೇ. 30ರಿಂದ 35ರಷ್ಟು ತೀಕ್ಷ್ಣವಾಗಿ ಕುಸಿಯಬಹುದು. ಇನ್ನೊಂದು, ಹಲವು ವರ್ಷಗಳವರೆಗೆ ನಿಧಾನವಾಗಿ ಕುಸಿಯುತ್ತಾ ಹೋಗಬಹುದು. ಇವೆರಡೂ ಕೂಡ ಘಾಸಿ ಮಾಡುವಂಥವು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?