AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಶಾಲೆ ಫೀಸ್, ಆಸ್ಪತ್ರೆ ಬಿಲ್ ದುಬಾರಿ ಯಾಕೆ? ಜೋಹೋ ಸಿಇಒ ಬಿಚ್ಚಿಟ್ಟಿದ್ದಾರೆ ಪ್ರಮುಖ ಕಾರಣ

Why Education, Healthcare, Housing costly in urban India: ಭಾರತದಲ್ಲಿ ಶಾಲೆಯ ಫೀಸ್, ಆಸ್ಪತ್ರೆ ಬಿಲ್, ಮನೆ ಬೆಲೆ ಯಾಕೆ ತೀರಾ ದುಬಾರಿಯಾಗುತ್ತಿದೆ? ಜೋಹೋ ಸಿಇಒ ಶ್ರೀಧರ್ ವೆಂಬು ಕಾರಣ ಬಿಚ್ಚಿಟಿದ್ದಾರೆ. ಅವರ ಪ್ರಕಾರ ರಿಯಲ್ ಎಸ್ಟೇಟ್ ಬೆಲೆ ಅಸ್ವಾಭಾವಿಕವಾಗಿ ಏರಿಕೆ ಆಗುತ್ತಿರುವುದು ಇದಕ್ಕೆ ಕಾರಣ. ರಾಜಕೀಯದಿಂದ ಭ್ರಷ್ಟ ಹಣ ರಿಯಲ್ ಎಸ್ಟೇಟ್​ನಲ್ಲಿ ಹರಿದುಬರುತ್ತಿರುವುದರಿಂದ ಭೂಮಿ ಬೆಲೆ ಬಹಳ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅವರು.

ಭಾರತದಲ್ಲಿ ಶಾಲೆ ಫೀಸ್, ಆಸ್ಪತ್ರೆ ಬಿಲ್ ದುಬಾರಿ ಯಾಕೆ? ಜೋಹೋ ಸಿಇಒ ಬಿಚ್ಚಿಟ್ಟಿದ್ದಾರೆ ಪ್ರಮುಖ ಕಾರಣ
ಶಾಲಾ ಮಕ್ಕಳ ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 19, 2024 | 11:30 AM

Share

ಬೆಂಗಳೂರು, ಆಗಸ್ಟ್ 19: ಭಾರತದಲ್ಲಿ ಜೀವನವೆಚ್ಚ ಬಹಳ ಹೆಚ್ಚಾಗುತ್ತಿದೆ. ಶಿಕ್ಷಣ ವೆಚ್ಚ ಹಣದುಬ್ಬರ ದರಕ್ಕಿಂತಲೂ ಹೆಚ್ಚಿನ ವೇಗವಾಗಿ ಹೆಚ್ಚುತ್ತಿದೆ. 20 ವರ್ಷದ ಹಿಂದೆ ಉತ್ತಮ ಶಾಲೆಯೊಂದರಲ್ಲಿ ವರ್ಷಕ್ಕೆ 30 ಸಾವಿರ ರೂ ಫೀಸ್ ಆಗುತ್ತಿತ್ತು. ಇವತ್ತು 4 ಲಕ್ಷ ರೂವಾದರೂ ಬೇಕು ಎನ್ನುವಂತಾಗಿದೆ. ನಗರ ಭಾಗದಲ್ಲಿ ಒಂದು ಸಾಮಾನ್ಯ ಶಾಲೆಯಲ್ಲಿ ವರ್ಷಕ್ಕೆ ಕನಿಷ್ಠ ಒಂದು ಲಕ್ಷ ರೂ ಶುಲ್ಕ ಇರುತ್ತದೆ. ಆಸ್ಪತ್ರೆಗಳ ವೆಚ್ಚವೂ ಕೂಡ ವರ್ಷದಿಂದ ವರ್ಷಕ್ಕೆ ತೀರಾ ಹೆಚ್ಚಾಗುತ್ತಿದೆ. ಜೋಹೋ ಸಂಸ್ಥೆಯ ಸಿಇಒ ಶ್ರೀಧರ್ ವೆಂಬು ಪ್ರಕಾರ ಇದಕ್ಕೆ ಪ್ರಮುಖ ಕಾರಣಗಳಲ್ಲಿ ರಿಯಲ್ ಎಸ್ಟೇಟ್ ಒಂದು.

ಬೆಂಗಳೂರು ಮೂಲದ ಹೂಡಿಕೆದಾರ ಅವಿರಲ್ ಭಟ್ನಾಗರ್ ಅವರು ತಮ್ಮ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಹಾಕಿದ ಒಂದು ಪೋಸ್ಟ್​ಗೆ ವೆಂಬು ಪ್ರತಿಕ್ರಿಯಿಸುತ್ತಾ, ಬೆಲೆ ಏರಿಕೆಗೆ ದುಬಾರಿ ರಿಯಲ್ ಎಸ್ಟೇಟ್ ಕಾರಣ ಎಂದಿದ್ದಾರೆ. ಹೈದರಾಬಾದ್​ನಲ್ಲಿ ಎಲ್​ಕೆಜಿಗೆ ಫೀಸ್ 3.7 ಲಕ್ಷ ರೂ ಆಗಿದೆ ಎಂದು ಅವಿರಳ್ ತಮ್ಮ ಪೋಸ್ಟ್​ನಲ್ಲಿ ಹೇಳಿದ್ದರು. ಇದಕ್ಕೆ ಜೋಹೋ ಸಿಇಒ ಪ್ರತಿಕ್ರಿಯೆ:

‘ಶಿಕ್ಷಣ ಕೈಗೆಟುಕದಂತಾಗಿದೆ. ನಗರ ಭಾಗದ ರಿಯಲ್ ಎಸ್ಟೇಟ್, ಹಾಗೂ ಸಣ್ಣ ಪಟ್ಟಣಗಳಲ್ಲಿನ ರಿಯಲ್ ಎಸ್ಟೇಟ್ ತೀರಾ ದುಬಾರಿಯಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಭೂಮಿ ಬೆಲೆ ಹೆಚ್ಚಾಗುತ್ತಿರುವುದರಿಂದ, ಅದು ಶಿಕ್ಷಣ, ಹೆಲ್ತ್​ಕೇರ್, ವಸತಿ, ರೀಟೇಲ್ ಮೊದಲಾದವುಗಳ ಮೇಲೆ ಪರಿಣಾಮ ಬೀರುತ್ತದೆ’ ಎಂದು ಶ್ರೀಧರ್ ವೆಂಬು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಎಂಜಿನಿಯರ್ ಪದವೀಧರರಿಗೆ ಎರಡೂವರೆ ಲಕ್ಷ ರೂ ಸಂಬಳ ಸುಳ್ಳು; ಕನಿಷ್ಠ 4 ಲಕ್ಷ ರೂ ವೇತನ: ಕಾಗ್ನೈಜೆಂಟ್ ಸ್ಪಷ್ಟನೆ

ಭಷ್ಟರ ಹಣ ರಿಯಲ್ ಎಸ್ಟೇಟ್​ಗೆ ಹರಿದುಬರುತ್ತಿದೆ…

‘ರಾಜಕೀಯದಿಂದ ಸಾಕಷ್ಟು ಭ್ರಷ್ಟ ಹಣ ರಿಯಲ್ ಎಸ್ಟೇಟ್​ನಲ್ಲಿ ಸಂಗ್ರಹಣೆ ಆಗುತ್ತಿದೆ. ಇದರಿಂದ ಮಾರುಕಟ್ಟೆ ಬೇಡಿಕೆಗಿಂತ ತೀವ್ರವಾಗಿ ಬೆಲೆ ಉಬ್ಬರ ಆಗುತ್ತಿದೆ. ಒಂದು ರೀತಿಯಲ್ಲಿ ನಾವೆಲ್ಲರೂ ದುಬಾರಿ ಮನೆ, ಶಾಲೆ, ಆಸ್ಪತ್ರೆ ಸೇವೆ ಮೂಲಕ ರಾಜಕೀಯ ಭ್ರಷ್ಟಾಚಾರಕ್ಕೆ ಹಣ ಪಾವತಿಸುತ್ತಿದ್ದೇವೆ,’ ಎಂದು ಜೋಹೋ ಸಿಇಒ ಮಾರ್ಮಿಕವಾಗಿ ಹೇಳಿದ್ದಾರೆ.

ಅದೇ ಪೋಸ್ಟ್​ನಲ್ಲಿ ಅವರು ತಮ್ಮ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ನೀಡಲು ಹೇಗೆ ಸಾಧ್ಯವಾಗುತ್ತಿದೆ ಎಂದು ಕಾರಣ ನೀಡಿದ್ದಾರೆ. ‘ಶಾಲಾ ಶಿಕ್ಷಣ ದುಬಾರಿಯಾಗದಂತೆ ಅದರಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ನಮ್ಮ ಶಾಲೆಗಳು ಉಚಿತ. ಆದರೆ, ಭೂಮಿ ಬೆಲೆ ಕಡಿಮೆ ಇರುವ ದೂರದ ಗ್ರಾಮೀಣ ಭಾಗದಲ್ಲಿ ಇದು ಸಾಧ್ಯವಾಗಿದೆ,’ ಎಂದು ಉದ್ಯಮಿಯಾದ ಅವರು ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?