ಪತಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ ಖ್ಯಾತ ನಟಿ
ಪೂನಂ ಧಿಲ್ಲೋನ್ ಅವರು 16 ನೇ ವಯಸ್ಸಿನಲ್ಲಿ ಮಿಸ್ ಯಂಗ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದು, ನಂತರ ಫೆಮಿನಾ ಮಿಸ್ ಇಂಡಿಯಾ ಆದರು. 'ತ್ರಿಶೂಲ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಅವರು 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನ ವಿವಾದಗಳಿಂದ ಕೂಡಿದೆ.

ನಟಿ ಪೂನಂ ಧಿಲ್ಲೋನ್ ಕೇವಲ 16 ನೇ ವಯಸ್ಸಿನಲ್ಲಿ ‘ಮಿಸ್ ಯಂಗ್ ಇಂಡಿಯಾ’ ಸೌಂದರ್ಯ ಸ್ಪರ್ಧೆಯನ್ನು ಗೆದ್ದರು. ನಂತರ ಅವರು ‘ಫೆಮಿನಾ ಮಿಸ್ ಇಂಡಿಯಾ’ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ರಾತ್ರೋರಾತ್ರಿ ಫೇಮಸ್ ಆದರು. ಯಶ್ ಚೋಪ್ರಾ (Yash Chopra) ನಿರ್ದೇಶನದ ‘ತ್ರಿಶೂಲ್’ ಚಿತ್ರದೊಂದಿಗೆ ಅವರು ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅವರು ಇಲ್ಲಿಯವರೆಗೆ ತಮ್ಮ ವೃತ್ತಿಜೀವನದಲ್ಲಿ ಸುಮಾರು 80 ಚಿತ್ರಗಳಲ್ಲಿ ನಟಿಸಿದ್ದಾರೆ. ಪೂನಂ ಧಿಲ್ಲೋನ್ ತಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಕಂಡಿದ್ದರೂ, ಅವರ ವೈಯಕ್ತಿಕ ಜೀವನವು ಹಲವು ಕಾರಣಗಳಿಂದ ವಿವಾದಗಳಲ್ಲಿ ಸಿಲುಕಿಕೊಂಡಿದೆ.
‘ತ್ರಿಶೂಲ್’ ಚಿತ್ರದ ಯಶಸ್ಸಿನ ನಂತರ, ಪೂನಂ ‘ನೂರಿ’ ಚಿತ್ರಕ್ಕೆ ಸಹಿ ಹಾಕಿದರು. ಈ ಚಿತ್ರದಲ್ಲಿ ಕೆಲಸ ಮಾಡುವಾಗ, ನಿರ್ದೇಶಕ ರಮೇಶ್ ತಲ್ವಾರ್ ಮತ್ತು ಪೂನಂ ಧಿಲ್ಲೋನ್ ಒಳ್ಳೆಯ ಸ್ನೇಹಿತರಾದರು. ಕ್ರಮೇಣ, ಅವರ ಪ್ರಣಯದ ವದಂತಿಗಳು ಉದ್ಯಮದಲ್ಲಿ ಹರಡಲು ಪ್ರಾರಂಭಿಸಿದವು. ಅಷ್ಟೇ ಅಲ್ಲ, ಇಬ್ಬರೂ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿಗಳೂ ಇದ್ದವು. ಸಿನಿಮಾ ಆಫರ್ಗಳನ್ನು ಕಳೆದುಕೊಳ್ಳುವ ಭಯದಿಂದ ಪೂನಂ ಈ ಎಲ್ಲ ವಿಷಯಗಳನ್ನು ಮರೆಮಾಡಿದ್ದಾರೆ ಎಂದು ಹೇಳಲಾಗಿತ್ತು. ರಮೇಶ್ ಅವರಿಗಾಗಿ ಜುಹುವಿನಲ್ಲಿ ಒಂದು ಬಂಗಲೆಯನ್ನು ಸಹ ಖರೀದಿಸಿದ್ದರು. ಆದರೆ ಪೂನಂ ಮತ್ತು ಯಶ್ ಚೋಪ್ರಾ ಬಗ್ಗೆ ಪತ್ರಿಕೆಗಳಲ್ಲಿ ಬಹಳಷ್ಟು ವಿಷಯಗಳು ಬರೆಯಲು ಪ್ರಾರಂಭಿಸಿದಾಗ, ರಮೇಶ್ ತಲ್ವಾಲ್ ಅವರೊಂದಿಗಿನ ಸಂಬಂಧವು ಕೊನೆಗೊಂಡಿದೆ ಎಂದು ಹೇಳಲಾಯಿತು.
ಪೂನಂ 1980 ರ ದಶಕದಲ್ಲಿ, ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ವಿವಾಹಿತ ನಿರ್ದೇಶಕ ರಾಜ್ ಸಿಪ್ಪಿ ಅವರನ್ನು ಪ್ರೀತಿಸುತ್ತಿದ್ದರು. ಇಡೀ ಚಿತ್ರರಂಗ ಅವರ ಸಂಬಂಧದ ಬಗ್ಗೆ ಮಾತನಾಡುತ್ತಿತ್ತು. ಪೂನಂ ಅವರು ರಾಜ್ ಅವರನ್ನು ಮದುವೆಯಾಗಲು ಬಯಸಿದ್ದರು. ಆದರೆ ರಾಜ್ ತನ್ನ ಕುಟುಂಬವನ್ನು ಬಿಟ್ಟು ಹೋಗಲು ಬಯಸಲಿಲ್ಲ. ಆದ್ದರಿಂದ ಅವರು ಕೆಲವು ತಿಂಗಳುಗಳ ನಂತರ ಬೇರ್ಪಟ್ಟರು. ಕೊನೆಗೆ, 1988 ರಲ್ಲಿ, ಅವರು ನಿರ್ಮಾಪಕ ಅಶೋಕ್ ಠಾಕೇರಿಯಾ ಅವರನ್ನು ವಿವಾಹವಾದರು. ಇಬ್ಬರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮದುವೆಯ ನಂತರ ಪೂನಂ ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡರು.
ಇದನ್ನೂ ಓದಿ: ಉಪೇಂದ್ರ-ಪ್ರಿಯಾಂಕಾ ಮಗಳಿಗೆ ಹುಟ್ಟುಹಬ್ಬದ ಸಂಭ್ರಮ; ಐಶ್ವರ್ಯಾಗೆ ಈಗೆಷ್ಟು ವರ್ಷ?
ಮದುವೆಯಾದ ಕೆಲವು ವರ್ಷಗಳ ನಂತರ, ಪೂನಂ ಮತ್ತು ಅಶೋಕ್ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸಿದವು. 1994ರಲ್ಲಿ ಅಶೋಕ್ ಅವರ ವಿವಾಹೇತರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಆ ಸಮಯದಲ್ಲಿ, ಪೂನಂ ಕೂಡ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದರು. ಕೊನೆಗೆ, ತನ್ನ ಗಂಡನ ಮೇಲೆ ಸೇಡು ತೀರಿಸಿಕೊಳ್ಳಲು ಅಥವಾ ಅವರಿಗೆ ಪಾಠ ಕಲಿಸಲು, ಪೂನಂ ಹಾಂಗ್ ಕಾಂಗ್ ಉದ್ಯಮಿ ಕಿಕು ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಎನ್ನಲಾಗಿದೆ. ಕಿಕು ಆಗಾಗ್ಗೆ ಪೂನಂ ಅವರನ್ನು ಭೇಟಿಯಾಗಲು ಭಾರತಕ್ಕೆ ಬರುತ್ತಿದ್ದರು. ಮತ್ತು ಕೆಲವೊಮ್ಮೆ ಪೂನಂ ಅವರಿಗಾಗಿ ಹಾಂಗ್ ಕಾಂಗ್ಗೆ ಸಹ ಹೋಗುತ್ತಿದ್ದರು. ನಿರಂತರ ಜಗಳಗಳು, ಅಪನಂಬಿಕೆ, ಮೋಸ ಮತ್ತು ಅಸ್ಥಿರತೆಯು ಪೂನಂ ಮತ್ತು ಅಶೋಕ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿಸಿತು. ಇಬ್ಬರೂ ಅಧಿಕೃತವಾಗಿ 1997 ರಲ್ಲಿ ಬೇರ್ಪಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:52 am, Sun, 20 April 25