AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aryavardhan Guruji: ದಿವ್ಯಾ ಉರುಡುಗಗಿಂತ ಆರ್ಯವರ್ಧನ್ ಕಡಿಮೆ ವೋಟ್ ಪಡೆದಿದ್ದು ಹೇಗೆ? ಇಲ್ಲಿದೆ ಉತ್ತರ

ಈ ಲಿಫ್ಟ್ ಮಾದರಿಯ ಮೇಲೆ ಮೊದಲು ನಿಂತ ದಿವ್ಯಾ ಎಲ್ಲರಿಗೂ ಗುಡ್​ಬೈ ಹೇಳಿದ್ದರು. ತಾವು ಬಿಗ್ ಬಾಸ್ ಫಿನಾಲೆ ತಲುಪಲು ಸಾಧ್ಯವೇ ಇಲ್ಲ ಎಂದು ಅವರಿಗೆ ಅನಿಸುತ್ತಲೇ ಇತ್ತು. ಅವರಿಗೇ ಈ ಬಗ್ಗೆ ಕಾನ್ಫಿಡೆನ್ಸ್ ಇರಲಿಲ್ಲ.

Aryavardhan Guruji: ದಿವ್ಯಾ ಉರುಡುಗಗಿಂತ ಆರ್ಯವರ್ಧನ್ ಕಡಿಮೆ ವೋಟ್ ಪಡೆದಿದ್ದು ಹೇಗೆ? ಇಲ್ಲಿದೆ ಉತ್ತರ
ದಿವ್ಯಾ-ಆರ್ಯವರ್ಧನ್
TV9 Web
| Edited By: |

Updated on:Dec 28, 2022 | 10:54 AM

Share

‘ಬಿಗ್ ಬಾಸ್ ಕನ್ನಡ ಸೀಸನ್​ 9’ (BBK 9) ಇನ್ನು ಮೂರ್ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಲಿದೆ. 100 ದಿನಗಳ ಜರ್ನಿಯಲ್ಲಿ ಫಿನಾಲೆಗೆ ಉಳಿದುಕೊಂಡಿದ್ದು ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಮಾತ್ರ. ಈ ಪೈಕಿ ಒಬ್ಬರು ರನ್ನರ್​ ಅಪ್ ಆದರೆ, ಇನ್ನೊಬ್ಬರು ವಿನ್ನರ್ ಆಗಲಿದ್ದಾರೆ. ಅದು ಯಾರು ಎನ್ನುವ ಪ್ರಶ್ನೆಗೆ ಡಿಸೆಂಬರ್ 31ರಂದು ಉತ್ತರ ಸಿಗಲಿದೆ. ಈ ಮಧ್ಯೆ ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ಡಿಸೆಂಬರ್ 27ರ ಎಪಿಸೋಡ್​ನಲ್ಲಿ ಔಟ್ ಆಗಿದ್ದಾರೆ. ಟಫ್ ಕಾಂಪಿಟೇಟರ್ ಎನಿಸಿಕೊಂಡಿದ್ದ ಅವರು ದಿವ್ಯಾಗಿಂತ ಹೆಚ್ಚಿನ ವೋಟ್ ಪಡೆಯಲು ಸಾಧ್ಯವಾಗಿಲ್ಲ.

ಮಿಡ್​ವೀಕ್​ನಲ್ಲಿ ಒಂದು ಎಲಿಮಿನೇಷನ್ ಆಗುತ್ತದೆ ಎಂಬ ವಿಚಾರವನ್ನು ಬಿಗ್ ಬಾಸ್ ಹೇಳಿದ್ದರು. ಮಂಗಳವಾರ ಈ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಬಿಗ್ ಬಾಸ್ ಮುಖ್ಯದ್ವಾರದ ಎದುರು ಭಾಗದಲ್ಲಿ ಒಂದು ಗೋಡೆ ಮಾದರಿಯನ್ನು ಹಾಕಲಾಗಿತ್ತು. ಬಾಗಿಲು ಹಾಗೂ ಗೋಡೆ ಮಾದರಿಯ ಮಧ್ಯೆ ಲಿಫ್ಟ್​​ ರೀತಿಯ ವಸ್ತುವನ್ನು ಇಡಲಾಗಿತ್ತು. ಅದರ ಮೇಲೆ ನಿಂತರೆ ಅದು ಮೇಲೆ ಕೆಳಗೆ ಓಡಾಡುತ್ತದೆ. ಆರ್ಯವರ್ಧನ್ ಅವರು ಕೆಳಗೆ ಹೋದವರು ಬರಲೇ ಇಲ್ಲ. ಈ ಮೂಲಕ ಅವರು ಎಲಿಮಿನೇಟ್ ಆದರು.

ಈ ಲಿಫ್ಟ್ ಮಾದರಿಯ ಮೇಲೆ ಮೊದಲು ನಿಂತ ದಿವ್ಯಾ ಎಲ್ಲರಿಗೂ ಗುಡ್​ಬೈ ಹೇಳಿದ್ದರು. ತಾವು ಬಿಗ್ ಬಾಸ್ ಫಿನಾಲೆ ತಲುಪಲು ಸಾಧ್ಯವೇ ಇಲ್ಲ ಎಂದು ಅವರಿಗೆ ಅನಿಸುತ್ತಲೇ ಇತ್ತು. ಅವರಿಗೇ ಈ ಬಗ್ಗೆ ಕಾನ್ಫಿಡೆನ್ಸ್ ಇರಲಿಲ್ಲ. ಈ ಕಾರಣಕ್ಕೆ ಅವರು ಎಲ್ಲರಿಗೂ ಬೈ ಹೇಳಿ ಹೊರಟಿದ್ದರು. ಆದರೆ, ಅವರು ಉಳಿದುಕೊಂಡರು. ಈ ಮೊದಲು ಎಲಿಮಿನೇಟ್ ಆಗಿ ಮತ್ತೆ ವೈಲ್ಡ್ ಕಾರ್ಡ್​ ಮೂಲಕ ಎಂಟ್ರಿ ಪಡೆದ ದೀಪಿಕಾ ದಾಸ್ ಕೂಡ ಫಿನಾಲೇ ಪ್ರವೇಶಿಸಿದರು. ಇದಕ್ಕೆ ಕಾರಣ ಅಭಿಮಾನಿಗಳ ವೋಟ್.

ಇದನ್ನೂ ಓದಿ
Image
Aryavardhan Guruji: ಫಿನಾಲೆಗೆ 3 ದಿನ ಇರುವಾಗ ಆರ್ಯವರ್ಧನ್​ ಗುರೂಜಿ ಔಟ್​; ಅಪ್ಪಾಜಿ ಅಂತ ಕಣ್ಣೀರು ಹಾಕಿದ ರೂಪೇಶ್​ ಶೆಟ್ಟಿ
Image
BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ
Image
Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
Image
Aryavardhan Guruji: ಕನ್ನಡ ಓದಲು ಕಷ್ಟಪಟ್ಟ ಗುರೂಜಿ; ಸಹಾಯ ಮಾಡಿದ ರಾಕೇಶ್​: ಇಲ್ಲಿದೆ ವಿಡಿಯೋ

ಇದನ್ನೂ ಓದಿ:  ಫಿನಾಲೆಗೆ 3 ದಿನ ಇರುವಾಗ ಆರ್ಯವರ್ಧನ್​ ಗುರೂಜಿ ಔಟ್​; ಅಪ್ಪಾಜಿ ಅಂತ ಕಣ್ಣೀರು ಹಾಕಿದ ರೂಪೇಶ್​ ಶೆಟ್ಟಿ

ಆರ್ಯವರ್ಧನ್ ಅವರು ಕೆಲವೊಮ್ಮೆ ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುತ್ತಿರಲಿಲ್ಲ. ಅವರು ತುಂಬಾನೇ ಡಬಲ್ ಗೇಮ್ ಆಡುತ್ತಿದ್ದರು. ಕೊನೆಯ ಹಂತದಲ್ಲೂ ಹಾಗೆಯೇ ಮಾಡಿದ್ದಾರೆ. ಕಪ್​ನ ರೂಪೇಶ್ ಶೆಟ್ಟಿಗೆ ಬಿಟ್ಟು ಕೊಡ್ತೀನಿ ಎಂದು ಒಮ್ಮೊಮ್ಮೆ ಹೇಳುತ್ತಿದ್ದ ಅವರು ಬಳಿಕ ನಾನೇ ಕಪ್ ಗೆಲ್ಲಬೇಕು ಎಂದು ಹೇಳುತ್ತಿದ್ದರು. ಇದು ಕೆಲವರಿಗೆ ಇಷ್ಟವಾಗಿಲ್ಲ. ದಿವ್ಯಾ ಹಾಗೂ ದೀಪಿಕಾ ದಾಸ್​ ಈ ಮೊದಲ ಸೀನಸ್​ಗಳಿಗೆ ಬಂದಿದ್ದರು. ಹೀಗಾಗಿ, ಅವರ ಅಭಿಮಾನಿ ಬಳಗ ದೊಡ್ಡದಿದೆ. ಇದು ಕೂಡ ಆರ್ಯವರ್ಧನ್​ಗೆ ಹಿನ್ನಡೆ ಆಗಿರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:05 am, Wed, 28 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್