AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Traffic Air Pollution: ಟ್ರಾಫಿಕ್​​ನಿಂದ ಉಂಟಾಗುವ ವಾಯು ಮಾಲಿನ್ಯವು ಮೆದುಳಿನ ಮೇಲೆ ಪರಿಣಾಮ: ಅಧ್ಯಯನ

ಟ್ರಾಫಿಕ್ ನಿಂದ ಉಂಟಾಗುವ ವಾಯು ಮಾಲಿನ್ಯವು ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮೆಮೊರಿ ನಷ್ಟ, ಅರಿವಿನ ಕ್ಷೀಣತೆ ಮತ್ತು ಆಲ್ಝೈಮರ್ ನಂತಹ ಮೆದುಳಿನ ಕಾಯಿಲೆಗಳ ಸಕ್ರಿಯಗೊಳಿಸುವಿಕೆಗೆ ಕಾರಣವಾಗಬಹುದು ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ.

Traffic Air Pollution: ಟ್ರಾಫಿಕ್​​ನಿಂದ ಉಂಟಾಗುವ ವಾಯು ಮಾಲಿನ್ಯವು ಮೆದುಳಿನ ಮೇಲೆ ಪರಿಣಾಮ: ಅಧ್ಯಯನ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: May 16, 2023 | 12:54 PM

Share

ಟ್ರಾಫಿಕ್ ಮತ್ತು ವಾಯುಮಾಲಿನ್ಯದ ಪರಿಣಾಮವು ನಮ್ಮ ದೇಹದ ಕಾರ್ಯನಿರ್ವಹಣೆಯ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವಾಯು ಮಾಲಿನ್ಯವು ಮಾನವನ ಆರೋಗ್ಯಕ್ಕೆ ದೊಡ್ಡ ಅಪಾಯವನ್ನು ಉಂಟುಮಾಡುತ್ತದೆ. ಕಲುಷಿತ ಗಾಳಿಯು ಸೂಕ್ಷ್ಮವಾದ ಕಣಗಳನ್ನು ಉಂಟುಮಾಡುತ್ತದೆ. ಇದು ಪಾರ್ಶ್ವವಾಯು, ಹೃದ್ರೋಗಗಳು, ಶ್ವಾಸಕೋಶದ ಕ್ಯಾನ್ಸರ್ ಹಾಗೂ ಇನ್ನಿತರ ದೀರ್ಘಕಾಲದ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಜೊತೆಗೆ ಇತ್ತೀಚಿನ ಹೊಸ ಸಂಶೋದನೆಯೊಂದು ಸಂಚಾರ ಮಾಲಿನ್ಯ ಮತ್ತು ಮೆದುಳಿನ ಅರಿವಿನ ನಡುವಿನ ಪರಸ್ಪರ ಸಂಬಂಧವನ್ನು ಅಧ್ಯಯನ ಮಾಡಿದೆ.

ಇರ್ವಿನ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧನೆಯು, ಸಂಚಾರ-ಸಂಬಂಧಿತ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಮೆಮೋರಿ ನಷ್ಟ, ಅರಿವಿನ ಕ್ಷೀಣತೆ ಮತ್ತು ಆಲ್ಝೈಮರ್ ಕಾಯಿಲೆಯ ಆಕ್ರಮಣಕ್ಕೆ ಸಂಬಂದಿಸಿದ ಮೆದುಳಿನ ಮಾರ್ಗಗಳ ಸಕ್ರಿಯಗೊಳಿಸುವಿಕೆಗೆ ಕಾರಣವಾಗುತ್ತದೆ. ಎಂದು ಕಂಡುಹಿಡಿದಿದೆ. ಅಧ್ಯಯನದ ಫಲಿತಾಂಶವನ್ನು ‘ಟಾಕ್ಸಿಕೊಲಾಜಿಕಲ್ ಸೈನ್ಸಸ್ ಜರ್ನಲ್’ ನಲ್ಲಿ ಪ್ರಕಟಿಸಲಾಗಿದೆ.

ಸಾರ್ವಜನಿಕ ಆರೋಗ್ಯದ ಯುಸಿಐ ಕಾರ್ಯಕ್ರಮದ ಪರಿಸರ ಮತ್ತು ಔದ್ಯೋಗಿಕ ಆರೋಗ್ಯದ ಸಹಾಯಕ ಪ್ರಾಧ್ಯಾಪಕ ಮತ್ತು ಅಧ್ಯಯನದ ಹಿರಿಯ ಲೇಖಕ ಮಸಾಶಿ ಕಿತಾಜಾವಾ ಹೇಳುತ್ತಾರೆ, ‘ವಾಯುಮಾಲಿನ್ಯ ಮತ್ತು ಆಲ್ಝೈಮರ್ ಕಾಯಿಲೆಯ ನಡುವಿನಲ್ಲಿ ಸಂಪರ್ಕವು ಸಂಬಂಧಿಸಿದೆ, ಏಕೆಂದರೆ ಸುತ್ತುವರಿದ ಗಾಳಿಯಲ್ಲಿ ವಿಷಕಾರಿಗಳ ಹರಡುವಿಕೆಯು ಜಾಗತಿಕವಾಗಿ ಹೆಚ್ಚುತ್ತಿದೆ, ಆದರೆ ಇರ್ವಿನ್ ನಲ್ಲಿ ಮನೆಯ ಹತ್ತಿರವೂ ಹೊಡೆಯುತ್ತಿದೆ.

ಆಲ್ಝೈಮರ್

ಕಾಯಿಲೆಯು ವಯಸ್ಸಾದವರಲ್ಲಿ ಬುದ್ಧಿಮಾಂದ್ಯತೆಯ ಸಾಮಾನ್ಯ ಕಾರಣವಾಗಿದೆ ಮತ್ತು ಇದು ಅಮೇರಿಕಾದಲ್ಲಿ ಹಾಗೂ ಇತರ ಹಲವು ದೇಶಗಳಲ್ಲಿ ಬೆಳೆಯುತ್ತಿರುವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿದೆ. ಆಲ್ಝೈಮರ್ ಕಾಯಿಲೆಯ ಎಲ್ಲಾ ಅಂಶಗಳ ಬಗ್ಗೆ ವ್ಯಾಪಕವಾದ ಸಂಶೋಧನೆಯ ಹೊರತಾಗಿಯೂ, ಇದರ ನಿಖರವಾದ ಮೂಲವು ಅಸ್ಪಷ್ಟವಾಗಿ ಉಳಿದಿದೆ. ಅನುವಂಶಿಕ ಪ್ರವೃತ್ತಿಗಳು ಈ ರೋಗದ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿದಿದ್ದರೂ ಅದರೊಂದಿಗೆ, ಪರಿಸರ ವಿಷಕಾರಿಗಳು, ನಿರ್ದಿಷ್ಟವಾಗಿ ವಾಯು ಮಾಲಿನ್ಯವು ಆಲ್ಝೈಮರ್ ಕಾಯಿಲೆಯ ಆಕ್ರಮಣಕ್ಕೆ ಕಾರಣವಾಗಬಹುದು ಎಂದು ಅಧ್ಯಯನವು ಹೇಳಿದೆ.

ಇದನ್ನೂ ಓದಿ:Healthy Cuisines: ಪ್ರಪಂಚದ ಟಾಪ್ 6 ಆರೋಗ್ಯಕರ ಪಾಕಪದ್ಧತಿಗಳ ಕುರಿತು ತಿಳಿಯಿರಿ

ಕಿತಾಜಾವಾ ಮತ್ತು ಅವರ ತಂಡವು ಎರಡು ರೀತಿಯ ವಯಸ್ಸಿನ ಇಲಿಗಳ ಮಾದರಿಯನ್ನು ಸಂಶೋಧನೆಯಲ್ಲಿ ಬಳಸಿಕೊಂಡಿದೆ. ಸಂಶೋಧಕರು ಇರ್ವಿನ್ ನಲ್ಲಿ ಸಂಗ್ರಹಿಸಿದ ಸುತ್ತುವರೆದ ಗಾಳಿಯ ಮೂಲಕ 12 ವಾರಗಳವರೆಗೆ 3 ಮತ್ತು 9 ತಿಂಗಳ ಇಲಿಗಳ ಮಾದರಿಗಳ ಗುಂಪನ್ನು ಅಲ್ಟ್ರಾಫೈನ್ ಕಣಗಳಿಗೆ ಒಡ್ಡಿದರು. ಎರಡನೇ ಗುಂಪನ್ನು ಶುದ್ಧೀಕರಿಸಿದ ಗಾಳಿಗೆ ಒಡ್ಡಲಾಯಿತು. ಹೆಚ್ಚು ದುರ್ಬಲವಾದ ಜೀವನ ಹಂತದಲ್ಲಿ ಕಣಗಳ ಒಡ್ಡುವಿಕೆಯ ಸಂಭಾವ್ಯ ಪರಿಣಾಮವನ್ನು ನಿರ್ಧರಿಸಲು ವಿಭಿನ್ನ ವಯಸ್ಸಿನ ಮಾದರಿಗಳನ್ನು ಬಳಸಲಾಗಿತ್ತು.

ಸಂಶೋಧಕರು ಮೆಮೊರಿ ಕಾರ್ಯಗಳು ಮತ್ತು ಅರಿವಿನ ಕಾರ್ಯಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ನಡೆಸಿದರು ಮತ್ತು ಕಣಗಳ ವಸ್ತುವಿಗೆ ಒಡ್ಡುವುದರಿಂದ ಎರಡೂ ಮಾದರಿಗಳು ದುರ್ಬಲಗೊಂಡಿವೆ ಎಂದು ಕಂಡುಹಿಡಿದರು. ಗಮನಾರ್ಹವಾಗಿ ಅವರ ಹಳೆಯ ಮಾದರಿಗಳು ಮೆದುಳಿನ ಪ್ಲೇಕ್ ಬಿಲ್ಡ್-ಅಪ್ ಮತ್ತು ಗ್ಲಿಯಲ್ ಸೆಲ್ ಸಕ್ರಿಯಗೊಳಿಸುವಿಕೆಯನ್ನು ತೋರಿಸಿವೆ ಎಂದು ಕಂಡುಹಿಡಿದರು, ಇದು ಆಲ್ಝೈಮರ್ ಕಾಯಿಲೆಯ ಆಕ್ರಮಣಕ್ಕೆ ಸಂಬಂಧಿಸಿದ ಉರಿಯೂತವನ್ನು ಹೆಚ್ಚಿಸುತ್ತದೆ.

ಸಾರ್ವಜನಿಕ ಮತ್ತು ಪರಿಸರ ನಿಯಂತ್ರಣ ಸಂಸ್ಥೆಗಳು ಆಲ್ಝೈಮರ್ ಕಾಯಿಲೆ ಮತ್ತು ಇತರ ಗಂಭೀರ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಕಣಗಳ ಮಟ್ಟವನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ವೇಗಗೊಳಿಸಬೇಕಾಗಿದೆ’ ಎಂದು ಅಧ್ಯಯನದ ಸಹ ಲೇಖಕ ಮೈಕಲ್ ಕ್ಲೇನ್ಮಲ್ ಹೇಳಿದರು. ಈ ಸಾಕ್ಷ್ಯವು ಆತಂಕಕಾರಿಯಾಗಿದೆ, ಮತ್ತು ಪರಿಣಾಮಕಾರಿ ಪುರಾವೆ ಆಧಾರಿತ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಲು ನಾವು ಕ್ರಮ ಕೈಗೊಳ್ಳುವುದು, ಜೀವನಶೈಲಿಯ ಬದಲಾವಣೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ನಮ್ಮ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ನಾವೆಲ್ಲರು ಒಟ್ಟಾಗಿ ಕೆಲಸ ಮಾಡುವುದು ಕಡ್ಡಾಯವಾಗಿದೆ’ ಎಂದು ಕಿತಾಜಾವಾ ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ