ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು; ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ಕಾಲೇಜಿಗೆ ಎಂಟ್ರಿ

ಶಾಲೆ, ಕಾಲೇಜು ಅಂದ ಕೂಡಲೇ ಓದು, ಆಟ, ಶಿಸ್ತು ಇರಬೇಕಾಗಿದ್ದೇ. ಇದೆಲ್ಲದರ ಜೊತೆಗೆ ವಿದ್ಯಾರ್ಥಿಗಳಿಗೆ ಬೇರೆ ಬೇರೆಯ ಚಟುವಟಿಕೆಗಳೂ ಇರಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳು ಖುಷಿಯಿಂದ ಕಾಲೇಜಿಗೆ ಬರುತ್ತಾರೆ. ಇದೇ ಕಾರಣಕ್ಕೆ ಧಾರವಾಡದ ಒಂದು ಕಾಲೇಜಿನಲ್ಲಿ ಒಂದು ವಾರದವರೆಗೆ ಫನ್ ವೀಕ್ ಎಂದು ಆಚರಿಸಲಾಯಿತು. ಈ ವಾರದ ಕೊನೆಯ ದಿನ ಸಾಂಪ್ರದಾಯಿಕ ದಿನ ಆಚರಿಸೋ ಮೂಲಕ ಶಾಲೆಯ ಆವರಣದಲ್ಲಿ ಹೊಸ ಜಗತ್ತನ್ನೇ ನಿರ್ಮಾಣ ಮಾಡಲಾಗಿತ್ತು.

|

Updated on: May 25, 2024 | 8:01 PM

ಇಳಕಲ್ ಸೀರೆ, ಸೊಂಟಕ್ಕೆ ಡಾಬು, ತಲೆ ತುಂಬ ಸೆರಗು, ಮೂಗಿಗೆ ಫಳ ಫಳ ಹೊಳೆಯೋ ಮೂಗುತಿ, ಕಿವಿಯಲ್ಲಿ ನೇತಾಡುತ್ತಿರುವ ಬೆಂಡೋಲಿ(ಕಿವಿ ಓಲೆ). ಇಲ್ಲಿ ಯಾವುದೋ ಸೌಂದರ್ಯ ಸ್ಪರ್ಧೆ ಅಥವಾ ಉಡುಗೆ ಸ್ಪರ್ಧೆ ನಡೆದಿಲ್ಲ. ಇದೆಲ್ಲ ನಡೆದಿದ್ದು ಧಾರವಾಡದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಾಲೇಜಿನ ಆವರಣದಲ್ಲಿ.

ಇಳಕಲ್ ಸೀರೆ, ಸೊಂಟಕ್ಕೆ ಡಾಬು, ತಲೆ ತುಂಬ ಸೆರಗು, ಮೂಗಿಗೆ ಫಳ ಫಳ ಹೊಳೆಯೋ ಮೂಗುತಿ, ಕಿವಿಯಲ್ಲಿ ನೇತಾಡುತ್ತಿರುವ ಬೆಂಡೋಲಿ(ಕಿವಿ ಓಲೆ). ಇಲ್ಲಿ ಯಾವುದೋ ಸೌಂದರ್ಯ ಸ್ಪರ್ಧೆ ಅಥವಾ ಉಡುಗೆ ಸ್ಪರ್ಧೆ ನಡೆದಿಲ್ಲ. ಇದೆಲ್ಲ ನಡೆದಿದ್ದು ಧಾರವಾಡದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಾಲೇಜಿನ ಆವರಣದಲ್ಲಿ.

1 / 6
ಈ ಕಾಲೇಜಿನ ಪದವಿ ವಿದ್ಯಾರ್ಥಿ-ವಿದ್ಯಾರ್ಥಿಗಳಿಗಾಗಿ ಉಪನ್ಯಾಸಕರು ಒಂದು ವಾರದವರೆಗೆ ಫನ್ ಡೇ ಆಚರಿಸಿದ್ದರು. ನಿತ್ಯವೂ ಒಂದೊಂದು ಬಗೆಯ ಬಟ್ಟೆ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಕೊನೆಯ ದಿನದಂದು ಸಾಂಪ್ರದಾಯಿಕ ಉಡುಗೆ ಧರಿಸಲು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶರ್ಟ್, ಲುಂಗಿ ಧರಿಸಿ ಬಂದಿದ್ದರೆ, ವಿದ್ಯಾರ್ಥಿನಿಯರು ಇಳಕಲ್ ಸೀರೆ ಉಟ್ಟುಕೊಂಡು ಬಂದು ಸಂಭ್ರಮಿಸಿದರು.

ಈ ಕಾಲೇಜಿನ ಪದವಿ ವಿದ್ಯಾರ್ಥಿ-ವಿದ್ಯಾರ್ಥಿಗಳಿಗಾಗಿ ಉಪನ್ಯಾಸಕರು ಒಂದು ವಾರದವರೆಗೆ ಫನ್ ಡೇ ಆಚರಿಸಿದ್ದರು. ನಿತ್ಯವೂ ಒಂದೊಂದು ಬಗೆಯ ಬಟ್ಟೆ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಕೊನೆಯ ದಿನದಂದು ಸಾಂಪ್ರದಾಯಿಕ ಉಡುಗೆ ಧರಿಸಲು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶರ್ಟ್, ಲುಂಗಿ ಧರಿಸಿ ಬಂದಿದ್ದರೆ, ವಿದ್ಯಾರ್ಥಿನಿಯರು ಇಳಕಲ್ ಸೀರೆ ಉಟ್ಟುಕೊಂಡು ಬಂದು ಸಂಭ್ರಮಿಸಿದರು.

2 / 6
ಕಾಲೇಜಿಗೆ ಟ್ರ್ಯಾಕ್ಟರ್ ಹಾಗೂ ಚಕ್ಕಡಿಗಳಲ್ಲಿ ಬಂದಿದ್ದ ವಿದ್ಯಾರ್ಥಿಗಳು, ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದ್ದರು. ಬಳಿಕ ಕಾಲೇಜಿನ ಆವರಣದಲ್ಲಿ ಚಕ್ಕಡಿಯಲ್ಲಿ ಸುತ್ತಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮದುವೆ ದಿಬ್ಬಣದ ವಾತಾವರಣ ನಿರ್ಮಾಣ ಮಾಡಿದರು.

ಕಾಲೇಜಿಗೆ ಟ್ರ್ಯಾಕ್ಟರ್ ಹಾಗೂ ಚಕ್ಕಡಿಗಳಲ್ಲಿ ಬಂದಿದ್ದ ವಿದ್ಯಾರ್ಥಿಗಳು, ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದ್ದರು. ಬಳಿಕ ಕಾಲೇಜಿನ ಆವರಣದಲ್ಲಿ ಚಕ್ಕಡಿಯಲ್ಲಿ ಸುತ್ತಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮದುವೆ ದಿಬ್ಬಣದ ವಾತಾವರಣ ನಿರ್ಮಾಣ ಮಾಡಿದರು.

3 / 6
ವಿದ್ಯಾರ್ಥಿಗಳು ಶರ್ಟ್, ಲುಂಗಿ ಧರಿಸಿ ಬಂದಿದ್ದರೆ, ವಿದ್ಯಾರ್ಥಿನಿಯರು ಮಾತ್ರ ಸಾಂಪ್ರದಾಯಿಕ ಶೈಲಿಯಲ್ಲಿ ಶೃಂಗರಿಸಿಕೊಂಡು ಬಂದಿದ್ದರು. ಥೇಟ್ ಹಳ್ಳಿ ಮಹಿಳೆಯರಂತೆ ಕಾಣುತ್ತಿದ್ದ ವಿದ್ಯಾರ್ಥಿನಿಯರು ಆವರಣದ ತುಂಬೆಲ್ಲಾ ಓಡಾಡಿ ಸಂಭ್ರಮಿಸಿದರು.

ವಿದ್ಯಾರ್ಥಿಗಳು ಶರ್ಟ್, ಲುಂಗಿ ಧರಿಸಿ ಬಂದಿದ್ದರೆ, ವಿದ್ಯಾರ್ಥಿನಿಯರು ಮಾತ್ರ ಸಾಂಪ್ರದಾಯಿಕ ಶೈಲಿಯಲ್ಲಿ ಶೃಂಗರಿಸಿಕೊಂಡು ಬಂದಿದ್ದರು. ಥೇಟ್ ಹಳ್ಳಿ ಮಹಿಳೆಯರಂತೆ ಕಾಣುತ್ತಿದ್ದ ವಿದ್ಯಾರ್ಥಿನಿಯರು ಆವರಣದ ತುಂಬೆಲ್ಲಾ ಓಡಾಡಿ ಸಂಭ್ರಮಿಸಿದರು.

4 / 6
ಬಗೆ ಬಗೆಯ ಮುತ್ತುಗಳನ್ನು ಹೊಂದಿರೋ ನತ್ತು, ಕಿವಿಗೆ ದೊಡ್ಡ ದೊಡ್ಡ ಬೆಂಡೋಲೆ, ಕೈಗೆ ಬಗೆ ಬಗೆಯ ಬಳೆ, ಕೊರಳಲ್ಲಿ ಕಾಸಿನ ಸರ ಧರಿಸಿದ್ದ ವಿದ್ಯಾರ್ಥಿನಿಯರ ಸಂಭ್ರಮ ಹೇಳತೀರದು. ನಿತ್ಯವೂ ಪಾಠ-ಪ್ರವಚನ ಅಂತಾ ಕಾಲ ಕಳೆಯೋ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮ ಒಂದು ಹೊಸ ಬಗೆಯ ಅನುಭವ ನೀಡಿತ್ತು.

ಬಗೆ ಬಗೆಯ ಮುತ್ತುಗಳನ್ನು ಹೊಂದಿರೋ ನತ್ತು, ಕಿವಿಗೆ ದೊಡ್ಡ ದೊಡ್ಡ ಬೆಂಡೋಲೆ, ಕೈಗೆ ಬಗೆ ಬಗೆಯ ಬಳೆ, ಕೊರಳಲ್ಲಿ ಕಾಸಿನ ಸರ ಧರಿಸಿದ್ದ ವಿದ್ಯಾರ್ಥಿನಿಯರ ಸಂಭ್ರಮ ಹೇಳತೀರದು. ನಿತ್ಯವೂ ಪಾಠ-ಪ್ರವಚನ ಅಂತಾ ಕಾಲ ಕಳೆಯೋ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮ ಒಂದು ಹೊಸ ಬಗೆಯ ಅನುಭವ ನೀಡಿತ್ತು.

5 / 6
ಆಧುನಿಕ ದಿನಗಳಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳು ಮರೆಯಾಗುತ್ತಿವೆ. ನಮ್ಮ ಸಾಂಪ್ರದಾಯಿಕ ಉಡುಗೆಯನ್ನು ಮತ್ತು ಆಭರಣಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾಗಿದ್ದು ಅನಿವಾರ್ಯ. ಇದೇ ಕಾರಣಕ್ಕೆ ಈ ಕಾಲೇಜಿನಲ್ಲಿ ಆಯೋಜಿಸಿದ್ದ ಈ ಸಾಂಪ್ರದಾಯಿಕ ದಿನ ಎಲ್ಲ ವಿದ್ಯಾರ್ಥಿಗಳಿಗೆ ಒಂದು ಹೊಸ ಅನುಭವ ನೀಡಿದ್ದಂತೂ ಸತ್ಯ.

ಆಧುನಿಕ ದಿನಗಳಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳು ಮರೆಯಾಗುತ್ತಿವೆ. ನಮ್ಮ ಸಾಂಪ್ರದಾಯಿಕ ಉಡುಗೆಯನ್ನು ಮತ್ತು ಆಭರಣಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾಗಿದ್ದು ಅನಿವಾರ್ಯ. ಇದೇ ಕಾರಣಕ್ಕೆ ಈ ಕಾಲೇಜಿನಲ್ಲಿ ಆಯೋಜಿಸಿದ್ದ ಈ ಸಾಂಪ್ರದಾಯಿಕ ದಿನ ಎಲ್ಲ ವಿದ್ಯಾರ್ಥಿಗಳಿಗೆ ಒಂದು ಹೊಸ ಅನುಭವ ನೀಡಿದ್ದಂತೂ ಸತ್ಯ.

6 / 6
Follow us
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್