AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SIP power: ಷೇರು ಮಾರುಕಟ್ಟೆಯನ್ನು ಕಾಪಾಡುತ್ತಿರುವ ಸಾಮಾನ್ಯ ಜನರ ಎಸ್​ಐಪಿ

Indian stock market updates: ಭಾರತೀಯ ಷೇರು ಮಾರುಕಟ್ಟೆ ಕಳೆದ ಕೆಲ ತಿಂಗಳಿಂದ ಹಿನ್ನಡೆಯಲ್ಲಿದೆ. ಸಾಕಷ್ಟು ವಿದೇಶೀ ಹೂಡಿಕೆಗಳು ಹೊರಹೋಗುತ್ತಿವೆ. ಆದಾಗ್ಯೂ ಮಾರುಕಟ್ಟೆ ಒಂದು ದಿನವೂ ಲೋಯರ್ ಸರ್ಕ್ಯೂಟ್​ಗೆ ಬಂದಿಲ್ಲ. ಇದಕ್ಕೆ ಕಾರಣ ಎಸ್​ಐಪಿ. ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಹೂಡಿಕೆದಾರರು ಮ್ಯೂಚುವಲ್ ಫಂಡ್​ಗಳ ಮೇಲೆ ಹಣ ಹಾಕುತ್ತಿರುವುದರಿಂದ ಮಾರುಕಟ್ಟೆ ಹೆಚ್ಚು ಹಿನ್ನಡೆ ಕಂಡಿಲ್ಲ.

SIP power: ಷೇರು ಮಾರುಕಟ್ಟೆಯನ್ನು ಕಾಪಾಡುತ್ತಿರುವ ಸಾಮಾನ್ಯ ಜನರ ಎಸ್​ಐಪಿ
ಎಸ್​ಐಪಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 13, 2025 | 11:17 AM

Share

ನವದೆಹಲಿ, ಫೆಬ್ರುವರಿ 13: ಷೇರು ಮಾರುಕಟ್ಟೆಯಿಂದ ಸಾವಿರಾರು ಕೋಟಿ ರೂ ಮೌಲ್ಯದ ಹೂಡಿಕೆಗಳನ್ನು ವಿದೇಶೀ ಹೂಡಿಕೆದಾರರು ಹೊರತೆಗೆದುಕೊಳ್ಳುತ್ತಿದ್ದರೂ ಭಾರತೀಯ ಷೇರು ಬಜಾರು ತೀರಾ ನೆಲಕಚ್ಚದೆ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಮ್ಯುಚುವಲ್ ಫಂಡ್ ಸಂಸ್ಥೆಯಿಂದ (ಎಎಂಎಫ್​ಐ) ಬಿಡುಗಡೆ ಮಾಡಲಾದ ದತ್ತಾಂಶದ ಪ್ರಕಾರ ಜನವರಿ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ 39,687.78 ಕೋಟಿ ರೂ ಬಂಡವಾಳ ಸಿಕ್ಕಿದೆ. ಇದು ಫಂಡ್​ಗಳಿಂದ ಹಿಂಪಡೆಯಲಾದ ಹಣವನ್ನು ಕಳೆದು ಸಿಕ್ಕಿರುವ ನಿವ್ವಳ ಒಳಹರಿವು. ಹಿಂದಿನ ತಿಂಗಳಾದ ಡಿಸೆಂಬರ್​ಗೆ ಹೋಲಿಸಿದರೆ ಜನವರಿಯಲ್ಲಿ ಈ ನಿವ್ವಳ ಒಳಹರಿವಿನಲ್ಲಿ ಶೇ. 4ರಷ್ಟು ಕಡಿಮೆ ಆಗಿದೆ. ಆದರೂ ಕೂಡ ಹೊರಹರಿವಿಗಿಂತ ಒಳಹರಿವು ಹೆಚ್ಚು ಇದೆ. ಕುತೂಹಲ ಎಂದರೆ, ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಪ್ರತೀ ತಿಂಗಳೂ ನಿವ್ವಳ ಒಳಹರಿವು ಸಿಕ್ಕಿದೆ.

ಮಾರುಕಟ್ಟೆ ಕೈಹಿಡಿದ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ (ಎಸ್​ಐಪಿ)

ಮ್ಯೂಚುವಲ್ ಫಂಡ್​ಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವ ಒಂದು ವಿಧಾನ ಎಸ್​ಐಪಿ. ಈ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಮೂಲಕ ಸಾಕಷ್ಟು ಹೂಡಿಕೆದಾರರು ಹಣ ತೊಡಗಿಸುತ್ತಾರೆ. ಮಾರುಕಟ್ಟೆ ಕುಸಿತದ ಟ್ರೆಂಡ್​ನಲ್ಲಿದ್ದರೂ ಜನವರಿಯಲ್ಲಿ ಎಸ್​ಐಪಿ ಮೂಲಕ 26,400 ಕೋಟಿ ರೂ ಹಣ ಮ್ಯೂಚುವಲ್ ಫಂಡ್​ಗಳಿಗೆ ಸಂದಾಯವಾಗಿದೆ. ಡಿಸೆಂಬರ್ ತಿಂಗಳಲ್ಲಿ 26,459 ಕೋಟಿ ರೂ ಎಸ್​ಐಪಿ ಮೂಲಕ ಬಂದಿತ್ತು. ಜನವರಿಯಲ್ಲಿ 26,000 ಕೋಟಿ ರೂ ಮಟ್ಟಕ್ಕಿಂತ ಮೇಲೆಯೇ ಎಸ್​ಐಪಿ ಹೂಡಿಕೆಗಳಿವೆ.

ಇದನ್ನೂ ಓದಿ: ಷೇರುಪೇಟೆ ರಕ್ತದೋಕುಳಿ; ಮಕಾಡೆ ಮಲಗಿರುವ ಸಾವಿರಕ್ಕೂ ಹೆಚ್ಚು ಷೇರುಗಳು

ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ಬಂದ ಹೂಡಿಕೆ ಒಳ ಹರಿವಿನಲ್ಲಿ ಎಸ್​ಐಪಿ ಪಾಲು ದೊಡ್ಡದು. ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ತಮ್ಮ ಹಣ ಹಿಂಪಡೆಯುತ್ತಿದ್ದರೂ ಒಮ್ಮೆಯೂ ಕೂಡ ಮಾರುಕಟ್ಟೆ ಲೋಯರ್ ಸರ್ಕ್ಯುಟ್​ಗೆ ಬರಲಿಲ್ಲ. ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ಗಳ ಮೂಲಕ ದೇಶೀಯ ಹೂಡಿಕೆದಾರರು ಮಾರುಕಟ್ಟೆಗೆ ಹಣ ಹರಿಸುತ್ತಿರುವುದು ಈ ಪತನ ಕುಸಿತ ತಡೆಯಲು ಪ್ರಮುಕ ಕಾರಣ.

ಒಟ್ಟಾರೆ ನಿರ್ವಹಿತ ಆಸ್ತಿಯಲ್ಲಿ ತುಸು ಇಳಿಮುಖ….

ಈಕ್ವಿಟಿ ಮ್ಯೂಚುವಲ್ ಫಂಡ್​ಗಳ ಬಳಿ ಇರುವ ಒಟ್ಟು ನಿರ್ವಹಿತ ಆಸ್ತಿ (ಎಯುಎಂ- ಅಸೆಟ್ಸ್ ಅಂಡರ್ ಮ್ಯಾನೇಜ್ಮೆಂಟ್) ಮೊತ್ತ ಶೇ. 4ರಷ್ಟು ಕಡಿಮೆ ಆಗಿದೆ. ಡಿಸೆಂಬರ್​ನಲ್ಲಿ 30.57 ಲಕ್ಷ ಕೋಟಿ ರೂ ಇದ್ದ ಬಂಡವಾಳವು ಜನವರಿಯಲ್ಲಿ 29.47ಕ್ಕೆ ಇಳಿದಿದೆ. ನಿರ್ವಹಿತ ಆಸ್ತಿಯಲ್ಲಿ ಸುಮಾರು ಒಂದು ಲಕ್ಷ ಕೋಟಿ ರೂಗೂ ಅಧಿಕ ಮೊತ್ತದಷ್ಟು ಇಳಿಕೆ ಆಗಿದೆ.

ಈಕ್ವಿಟಿ ಮ್ಯೂಚುವಲ್ ಫಂಡ್​ಗಳ ಪೈಕಿ ಜನವರಿಯಲ್ಲಿ ಲಾರ್ಜ್ ಕ್ಯಾಪ್ ಫಂಡ್​ಗಳಿಗೆ ಬಂದ ಬಂಡವಾಳ ಒಳಹರಿವು ಶೇ. 52.3ರಷ್ಟು ಹೆಚ್ಚಾಗಿದೆ. ಸ್ಮಾಲ್​ಕ್ಯಾಪ್ ಫಂಡ್​ಗಳಿಗೆ ಶೇ. 22.6ರಷ್ಟು ಹೆಚ್ಚು ಹೂಡಿಕೆ ಬಂದಿವೆ.

ಇದನ್ನೂ ಓದಿ: ಅಮೆರಿಕದ ಚಿಪ್​ಟೂಲ್ ತಯಾರಿಸುವ ಲ್ಯಾಮ್ ರಿಸರ್ಚ್​ನಿಂದ 10,000 ಕೋಟಿ ರೂ ಹೂಡಿಕೆ; ಇನ್ವೆಸ್ಟ್ ಕರ್ನಾಟಕಕ್ಕೆ ಉದ್ಯಮವಲಯದಿಂದ ನಿರೀಕ್ಷೆಮೀರಿ ಸ್ಪಂದನೆ

ಆದರೆ, ಸೆಕ್ಟರ್ ಅಥವಾ ಥೀಮ್ಯಾಟಿಕ್ ಮ್ಯೂಚುವಲ್ ಫಂಡ್​ಗಳಿಗೆ ಬಂದ ಹೂಡಿಕೆ ಒಳ ಹರಿವಿನಲ್ಲಿ ಶೇ. 41.2ರಷ್ಟು ಇಈಲಿಮುಖವಾಗಿದೆ. ಆದಾಗ್ಯೂ, ಸ್ಮಾಲ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್ ಫಂಡ್​ಗಳಿಗೆ ಹೋಲಿಸಿದರೆ ಥೀಮ್ಯಾಟಿಕ್ ಫಂಡ್​ಗಳಿಗೆ ಅತಿಹೆಚ್ಚು ಹೂಡಿಕೆಗಳು ಬಂದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು