AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಟ್ಲಿ ಸಿನಿಮಾಕ್ಕೆ ಅಲ್ಲು ಅರ್ಜುನ್ ಕಠಿಣ ತಯಾರಿ, ಫಿಸಿಕಲ್ ಜೊತೆ ಮೆಂಟಲ್ ತರಬೇತಿ

Allu Arjun-Atlee: ನಟ ಅಲ್ಲು ಅರ್ಜುನ್ ‘ಪುಷ್ಪ 2’ ಬಳಿಕ ತ್ರಿವಿಕ್ರಮ್ ಬದಲಿಗೆ ಅಟ್ಲಿ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಭಾರಿ ಬಜೆಟ್​ನ ಈ ಸಿನಿಮಾಕ್ಕಾಗಿ ತಯಾರಿಯನ್ನು ಅಲ್ಲು ಅರ್ಜುನ್ ಈಗಾಗಲೇ ಆರಂಭಿಸಿದ್ದಾರೆ. ವಿದೇಶಿ ಫಿಟ್​ನೆಸ್ ಕೋಚ್ ಅನ್ನು ಪಡೆದುಕೊಂಡಿರುವ ಅಲ್ಲು ಅರ್ಜುನ್, ದೈಹಿಕ ತರಬೇತಿ ಜೊತೆಗೆ ಮಾನಸಿಕ ತರಬೇತಿಯನ್ನು ಸಹ ಪಡೆಯುತ್ತಿದ್ದಾರೆ.

ಅಟ್ಲಿ ಸಿನಿಮಾಕ್ಕೆ ಅಲ್ಲು ಅರ್ಜುನ್ ಕಠಿಣ ತಯಾರಿ, ಫಿಸಿಕಲ್ ಜೊತೆ ಮೆಂಟಲ್ ತರಬೇತಿ
Allu Arjun Atlee
Follow us
ಮಂಜುನಾಥ ಸಿ.
|

Updated on: May 06, 2025 | 11:24 AM

ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಸಾವಿರ ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿದ್ದು, ಹಲವು ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಬರೆದಿದೆ. ‘ಪುಷ್ಪ 2’ನ ಭರ್ಜರಿ ಗೆಲುವಿನ ಬಳಿಕ ಅಂತಹುದೇ ದೊಡ್ಡ ಸ್ಕೇಲ್​ನ ಸಿನಿಮಾಗಳನ್ನು ಅಲ್ಲು ಅರ್ಜುನ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ‘ಪುಷ್ಪ 2’ ಸಿನಿಮಾ ಬಳಿಕ ತ್ರಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಸಿನಿಮಾ ‘ಸಾಮಾನ್ಯ’ ಬಜೆಟ್​ನ ಸಿನಿಮಾ ಆಗಿರುವ ಕಾರಣ ಇದೀಗ ಅಲ್ಲು ಅರ್ಜುನ್ ಭಾರಿ ಬಜೆಟ್​ನ ಫ್ಯಾಂಟಸಿ ಕತೆಯುಳ್ಳ ಅಟ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.

ಅಟ್ಲಿ, ಹಾಲಿವುಡ್​ನ ಮಾರ್ವೆಲ್​ ಸ್ಟುಡಿಯೋಸ್ ಮಾದರಿಯ ಕತೆಯನ್ನು ಮಾಡಿದ್ದು, ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ರೀತಿ ಯಾವುದೋ ಬೇರೆ ಲೋಕದಲ್ಲಿ ನಡೆಯುವಂತೆ ಕತೆ ಹೆಣೆದುಕೊಂಡಿದ್ದಾರೆ. ಸಿನಿಮಾನಲ್ಲಿ ಚಿತ್ರ ವಿಚಿತ್ರ ಜೀವಿಗಳು, ಜನರು, ಅತ್ಯಾಧುನಿಕ ಆಯುಧಗಳು, ವಾಹನಗಳು ಇರಲಿವೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಸೂಪರ್ ಹೀರೋ ಪಾತ್ರದಲ್ಲಿ ನಟಿಸಲಿದ್ದಾರೆ.

ಈ ಸಿನಿಮಾಕ್ಕಾಗಿ ಅಲ್ಲು ಅರ್ಜುನ್ ಈಗಾಗಲೆ ತಯಾರಿ ಆರಂಭಿಸಿದ್ದಾರೆ. ಸಿನಿಮಾಕ್ಕಾಗಿ ಫಿಸಿಕಲ್ ಮಾತ್ರವೇ ಅಲ್ಲದೆ ಮೆಂಟಲ್ ತಯಾರಿಯನ್ನು ಸಹ ಅಲ್ಲು ಅರ್ಜುನ್ ಮಾಡಲಿದ್ದಾರೆ. ಇತ್ತೀಚೆಗಷ್ಟೆ ಹಾಲಿವುಡ್ ಫಿಟ್​ಸೆನ್ ಕೋಚ್ ಲಾಯ್ಡ್ ಸ್ಟಿವನ್ಸ್ ಜೊತೆಗೆ ಅಲ್ಲು ಅರ್ಜುನ್ ಫೋಟೊ ವೈರಲ್ ಆಗಿದ್ದು, ಮುಂದಿನ ಸಿನಿಮಾಕ್ಕಾಗಿ ಅಲ್ಲು ಅರ್ಜುನ್ ಅವರನನ್ನು ಲಾಯ್ಡ್ ಸ್ಟಿವನ್ಸ್ ತರಬೇತುಗೊಳಿಸಲಿದ್ದಾರೆ.

ಇದನ್ನೂ ಓದಿ:‘ನಮಗೆ ಈಗ ವೇದಿಕೆ ಸಿಕ್ಕಿದೆ’; ವೇವ್ಸ್ ಬಗ್ಗೆ ಅಲ್ಲು ಅರ್ಜುನ್ ಮಾತು

ಈ ಸಿನಿಮಾದ ಚಿತ್ರೀಕರಣ ಅತ್ಯಂತ ಕಠಿಣವಾಗಿರಲಿದ್ದು, ಬಹಳ ಸುದೀರ್ಘವಾಗಿಯೂ ಚಿತ್ರೀಕರಣ ನಡೆಯಲಿದೆ. ಇದೇ ಕಾರಣಕ್ಕೆ ದೈಹಿಕ ತರಬೇತಿಯ ಜೊತೆಗೆ ಮಾನಸಿಕ ತರಬೇತಿಯನ್ನು ಸಹ ಅಲ್ಲು ಅರ್ಜುನ್ ಪಡೆಯುತ್ತಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ನಿರ್ವಹಿಸುವ ಪಾತ್ರದ ಆಟಿಟ್ಯೂಡ್​ಗೆ ಸರಿಹೊಂದುವಂತೆ ಮಾನಸಿಕ ತರಬೇತಿಯನ್ನು ಅಲ್ಲು ಅರ್ಜುನ್​ಗೆ ನೀಡಲಾಗುತ್ತಿದೆಯಂತೆ.

ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಮತ್ತು ಅಟ್ಲಿ ಅವರುಗಳು ಹಾಲಿವುಡ್​ಗೆ ಹೋಗಿ ಅಲ್ಲಿನ ದೊಡ್ಡ ದೊಡ್ಡ ವಿಎಫ್​ಎಕ್ಸ್ ಸಂಸ್ಥೆಗಳು, ಪ್ರಾಸ್ತೆಟಿಕ್ ಸಂಸ್ಥೆಗಳೊಟ್ಟಿಗೆ ಮಾತುಕತೆ ಆಡಿದ್ದು, ತಮ್ಮ ಸಿನಿಮಾಕ್ಕೆ ಬೇಕಾದ ಪ್ರಾಸ್ತೆಟಿಕ್​ಗಳನ್ನು, ವಿಎಫ್​ಎಕ್ಸ್ ಮಾಡೆಲ್​ಗಳನ್ನು, ಥೀಮ್​ಗಳನ್ನು ರೆಡಿ ಮಾಡಿಸಿಕೊಂಡಿದ್ದಾರೆ. ಇದರ ಜೊತೆಗೆ ಅಲ್ಲು ಅರ್ಜುನ್ ಅವರ ಫೇಶಿಯಲ್ ಎಕ್ಸ್​ಪ್ರೆಶನ್ ಕ್ಯಾಪ್ಚರ್ ಅನ್ನು ಸಹ ಮಾಡಲಾಗಿದೆ. ಈ ಸಿನಿಮಾಕ್ಕೆ ಸನ್ ನೆಟ್​ವರ್ಕ್ಸ್​ನ ಕಲಾನಿಧಿಮಾರನ್ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?