AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada OTT Finale: ಸಾನ್ಯಾ ಅಯ್ಯರ್​ಗೆ ಸಾನ್ಯಾ ಶೆಟ್ಟಿ ಅಂತ ಕರೆದರೆ ಆಹಾ ಎಷ್ಟೊಂದು ಖುಷಿ; ಇಲ್ಲಿದೆ ವಿಡಿಯೋ ಸಾಕ್ಷಿ

Sanya Iyer | Roopesh Shetty: ರೂಪೇಶ್​ ಶೆಟ್ಟಿ ಅವರನ್ನು ಸಾನ್ಯಾ ಐಯ್ಯರ್​ ಅವರು ರೂಪಿ ಎಂದು ಕರೆದರು. ಅದು ಕಿಚ್ಚ ಸುದೀಪ್​ ಅವರ ಗಮನ ಸೆಳೆಯಿತು. ಫಿನಾಲೆ ವೇದಿಕೆಯಲ್ಲಿ ಆ ಬಗ್ಗೆ ಚರ್ಚೆ ನಡೆಯಿತು.

Bigg Boss Kannada OTT Finale: ಸಾನ್ಯಾ ಅಯ್ಯರ್​ಗೆ ಸಾನ್ಯಾ ಶೆಟ್ಟಿ ಅಂತ ಕರೆದರೆ ಆಹಾ ಎಷ್ಟೊಂದು ಖುಷಿ; ಇಲ್ಲಿದೆ ವಿಡಿಯೋ ಸಾಕ್ಷಿ
ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್
TV9 Web
| Edited By: |

Updated on:Sep 16, 2022 | 6:33 PM

Share

ಬಿಗ್​ ಬಾಸ್​ ಎಂದರೆ ಬರಿ ಆಟ ಅಲ್ಲ. ದೊಡ್ಮನೆಯಲ್ಲಿ ಭರಪೂರ ಭಾವನೆಗಳಿಗೂ ಜಾಗ ಇದೆ. ಅನೇಕ ಸ್ಪರ್ಧಿಗಳಿಗೆ ಪ್ರೀತಿ ಚಿಗುರಿದ ಉದಾಹರಣೆ ಸಾಕಷ್ಟಿದೆ. ಅಲ್ಲಿ ಸ್ಪರ್ಧಿಸಿದ ಬಳಿಕ ಮದುವೆ ಆದವರೂ ಇದ್ದಾರೆ. ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಕನ್ನಡದ ಬಿಗ್​ ಬಾಸ್​ (Bigg Boss Kannada OTT) ಕಾರ್ಯಕ್ರಮ ನಡೆದಿದೆ. ಈ ಸೀಸನ್​ನಲ್ಲಿ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಪಡೆದುಕೊಂಡಿದ್ದರು. ಅಂತಿಮವಾಗಿ 8 ಜನರು ಫಿನಾಲೆ ವಾರದವರೆಗೂ ಬಂದರು. ಆ ಪೈಕಿ ಕೆಲವರ ನಡುವೆ ಅತಿ ಹೆಚ್ಚು ಸ್ನೇಹ-ಸಲುಗೆ ಬೆಳೆಯಿತು. ರೂಪೇಶ್​ ಶೆಟ್ಟಿ ಅವರು ಸಾನ್ಯಾ ಐಯ್ಯರ್​ (Sanya Iyer) ಜೊತೆ ಹೆಚ್ಚು ಆತ್ಮೀಯವಾಗಿ ನಡೆದುಕೊಂಡರು. ಇದೇ ವಿಚಾರದ ಬಗ್ಗೆ ಬಿಗ್ ಬಾಸ್​ ಕನ್ನಡ ಒಟಿಟಿ ಫಿನಾಲೆಯಲ್ಲೂ ಚರ್ಚೆ ಆಗಿದೆ. ಸಾನ್ಯಾಗೆ ರೂಪೇಶ್ ಶೆಟ್ಟಿ (Roopesh Shetty) ಅವರು ಸಾನ್ಯಾ ಶೆಟ್ಟಿ ಎಂದು ಕರೆದಿದ್ದರು ಎಂಬುದು ಗೊತ್ತಾಗಿದೆ.

ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಕಾರ್ಯಕ್ರಮವನ್ನು ತುಂಬ ಲವಲವಿಕೆಯಿಂದ ನಡೆಸಿಕೊಡುತ್ತಾರೆ. ಟಿವಿಯಲ್ಲಿ ಸತತವಾಗಿ 8 ಸೀಸನ್​ಗಳನ್ನು ನಡೆಸಿಕೊಟ್ಟ ಅನುಭವ ಅವರಿಗೆ ಇದೆ. ಒಟಿಟಿ ಸೀಸನ್​ ಕೂಡ ಅವರ ನಿರೂಪಣೆಯಲ್ಲೇ ಯಶಸ್ವಿಯಾಗಿ ಮೂಡಿಬಂದಿದೆ. ಇಂದು (ಸೆ.16) ಇದರ ಫಿನಾಲೆ ಸಂಚಿಕೆ ಪ್ರಸಾರ ಆಗಿದೆ. ಈ ವೇಳೆ ರೂಪೇಶ್​ ಶೆಟ್ಟಿ ಅವರನ್ನು ಸಾನ್ಯಾ ಐಯ್ಯರ್​ ಅವರು ರೂಪಿ ಎಂದು ಕರೆದರು. ಅದು ಸುದೀಪ್​ ಅವರ ಗಮನ ಸೆಳೆಯಿತು.

ಇದನ್ನೂ ಓದಿ
Image
ಪ್ರೇಯಸಿ ನಂದಿನಿ ಔಟ್​ ಆದ್ಮೇಲೆ ಸಾನ್ಯಾ ಜತೆ ಹೆಚ್ಚಿತು ಜಶ್ವಂತ್​ ಸಲುಗೆ; ರೂಪೇಶ್​ಗೆ ಟೆನ್ಷನ್​ ಶುರು
Image
BBK: ‘ಬಿಗ್ ಬಾಸ್​ನಲ್ಲಿ ರೂಪೇಶ್​, ಸೋಮಣ್ಣ, ರಾಕೇಶ್​ ಟಾಪ್​ 3 ಆಗ್ತಾರೆ’: ಭವಿಷ್ಯ ನುಡಿದ ಅಕ್ಷತಾ ಕುಕ್ಕಿ
Image
ಬಿಗ್ ಬಾಸ್​ ಸಿನಿಮಾದಲ್ಲಿ ಸೋಮಣ್ಣ ಹೀರೋ, ಸೋನು ಹೀರೋಯಿನ್​, ರಾಕೇಶ್​ ವಿಲನ್​: ಕಾಮಿಡಿ ಯಾರು?
Image
Sanya Iyer: ಸಾನ್ಯಾ ಐಯ್ಯರ್​ ಎದುರು ಮನದ ಮಾತು ತೆರೆದಿಟ್ಟ ರೂಪೇಶ್​ ಶೆಟ್ಟಿ​: ಪಾಸಿಟಿವ್​ ಆಗಿ ಪ್ರತಿಕ್ರಿಯಿಸಿದ ನಟಿ

‘ಕೊನೇ ದಿನದ ರಾತ್ರಿ ನಿದ್ರೆ ಬಂತಾ’ ಎಂದು ಸುದೀಪ್​ ಕೇಳಿದರು. ‘ಕೊನೆಯಲ್ಲಿ ಮಲಗಿದ್ದು ನಾನು ಮತ್ತು ರೂಪಿ’ ಎಂದು ಸಾನ್ಯಾ ಹೇಳಿದರು. ‘ರೂಪಿ ಎಂದರೆ ಯಾರು’ ಎಂದು ಪ್ರಶ್ನೆ ಕಿಚ್ಚನ ಕಡೆಯಿಂದ ಬಂತು. ‘ರೂಪಿ ಎಂದರೆ ರೂಪೇಶ್’ ಎಂದರು ಸಾನ್ಯಾ. ‘ಅವರು ನಿಮಗೆ ಏನಂಥ ಕರೆದರೆ ಇಷ್ಟ’ ಎಂದು ಸಾನ್ಯಾಗೆ ಸುದೀಪ್​ ಪ್ರಶ್ನಿಸಿದರು. ‘ಸಾನ್ಯಾ ಶೆಟ್ಟಿ ಅಂತ ಬಂತು ಸರ್​. ಅದು ನನಗೆ ಸಖತ್​ ಇಷ್ಟ ಆಯ್ತು’ ಎಂದು ಸಾನ್ಯಾ ಅವರು ನೇರವಾಗಿ ಹೇಳಿದ್ದಾರೆ. ‘ನಾನು ಇಲ್ಲಿ ಏನೋ ಬೇರೆ ಪ್ರೊಫೆಷನ್​ ಶುರು ಮಾಡಿದ್ದೇನೆ ಎಂಬ ಫೀಲಿಂಗ್​ ಬರುತ್ತಿದೆ’ ಎಂದು ಸುದೀಪ್​ ಕೇಳಿದ್ದು ಕೇಳಿ ಎಲ್ಲರೂ ನಕ್ಕಿದ್ದಾರೆ.

ಫಿನಾಲೆ ವಾರದವರೆಗೂ ಬಂದ ಸೋನು ಶ್ರೀನಿವಾಸ್​ ಗೌಡ ಮತ್ತು ರಾಕೇಶ್​ ಅಡಿಗ ನಡುವೆಯೂ ಅದೇ ರೀತಿಯ ಆತ್ಮೀಯತೆ ಇತ್ತು. ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ಕಾಲ ಅವರಿಬ್ಬರು ಜೊತೆಯಾಗಿ ಇರುತ್ತಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:33 pm, Fri, 16 September 22

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ