AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada OTT Finale: ಸಾನ್ಯಾ ಅಯ್ಯರ್​ಗೆ ಸಾನ್ಯಾ ಶೆಟ್ಟಿ ಅಂತ ಕರೆದರೆ ಆಹಾ ಎಷ್ಟೊಂದು ಖುಷಿ; ಇಲ್ಲಿದೆ ವಿಡಿಯೋ ಸಾಕ್ಷಿ

Sanya Iyer | Roopesh Shetty: ರೂಪೇಶ್​ ಶೆಟ್ಟಿ ಅವರನ್ನು ಸಾನ್ಯಾ ಐಯ್ಯರ್​ ಅವರು ರೂಪಿ ಎಂದು ಕರೆದರು. ಅದು ಕಿಚ್ಚ ಸುದೀಪ್​ ಅವರ ಗಮನ ಸೆಳೆಯಿತು. ಫಿನಾಲೆ ವೇದಿಕೆಯಲ್ಲಿ ಆ ಬಗ್ಗೆ ಚರ್ಚೆ ನಡೆಯಿತು.

Bigg Boss Kannada OTT Finale: ಸಾನ್ಯಾ ಅಯ್ಯರ್​ಗೆ ಸಾನ್ಯಾ ಶೆಟ್ಟಿ ಅಂತ ಕರೆದರೆ ಆಹಾ ಎಷ್ಟೊಂದು ಖುಷಿ; ಇಲ್ಲಿದೆ ವಿಡಿಯೋ ಸಾಕ್ಷಿ
ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್
TV9 Web
| Edited By: |

Updated on:Sep 16, 2022 | 6:33 PM

Share

ಬಿಗ್​ ಬಾಸ್​ ಎಂದರೆ ಬರಿ ಆಟ ಅಲ್ಲ. ದೊಡ್ಮನೆಯಲ್ಲಿ ಭರಪೂರ ಭಾವನೆಗಳಿಗೂ ಜಾಗ ಇದೆ. ಅನೇಕ ಸ್ಪರ್ಧಿಗಳಿಗೆ ಪ್ರೀತಿ ಚಿಗುರಿದ ಉದಾಹರಣೆ ಸಾಕಷ್ಟಿದೆ. ಅಲ್ಲಿ ಸ್ಪರ್ಧಿಸಿದ ಬಳಿಕ ಮದುವೆ ಆದವರೂ ಇದ್ದಾರೆ. ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಕನ್ನಡದ ಬಿಗ್​ ಬಾಸ್​ (Bigg Boss Kannada OTT) ಕಾರ್ಯಕ್ರಮ ನಡೆದಿದೆ. ಈ ಸೀಸನ್​ನಲ್ಲಿ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಪಡೆದುಕೊಂಡಿದ್ದರು. ಅಂತಿಮವಾಗಿ 8 ಜನರು ಫಿನಾಲೆ ವಾರದವರೆಗೂ ಬಂದರು. ಆ ಪೈಕಿ ಕೆಲವರ ನಡುವೆ ಅತಿ ಹೆಚ್ಚು ಸ್ನೇಹ-ಸಲುಗೆ ಬೆಳೆಯಿತು. ರೂಪೇಶ್​ ಶೆಟ್ಟಿ ಅವರು ಸಾನ್ಯಾ ಐಯ್ಯರ್​ (Sanya Iyer) ಜೊತೆ ಹೆಚ್ಚು ಆತ್ಮೀಯವಾಗಿ ನಡೆದುಕೊಂಡರು. ಇದೇ ವಿಚಾರದ ಬಗ್ಗೆ ಬಿಗ್ ಬಾಸ್​ ಕನ್ನಡ ಒಟಿಟಿ ಫಿನಾಲೆಯಲ್ಲೂ ಚರ್ಚೆ ಆಗಿದೆ. ಸಾನ್ಯಾಗೆ ರೂಪೇಶ್ ಶೆಟ್ಟಿ (Roopesh Shetty) ಅವರು ಸಾನ್ಯಾ ಶೆಟ್ಟಿ ಎಂದು ಕರೆದಿದ್ದರು ಎಂಬುದು ಗೊತ್ತಾಗಿದೆ.

ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಕಾರ್ಯಕ್ರಮವನ್ನು ತುಂಬ ಲವಲವಿಕೆಯಿಂದ ನಡೆಸಿಕೊಡುತ್ತಾರೆ. ಟಿವಿಯಲ್ಲಿ ಸತತವಾಗಿ 8 ಸೀಸನ್​ಗಳನ್ನು ನಡೆಸಿಕೊಟ್ಟ ಅನುಭವ ಅವರಿಗೆ ಇದೆ. ಒಟಿಟಿ ಸೀಸನ್​ ಕೂಡ ಅವರ ನಿರೂಪಣೆಯಲ್ಲೇ ಯಶಸ್ವಿಯಾಗಿ ಮೂಡಿಬಂದಿದೆ. ಇಂದು (ಸೆ.16) ಇದರ ಫಿನಾಲೆ ಸಂಚಿಕೆ ಪ್ರಸಾರ ಆಗಿದೆ. ಈ ವೇಳೆ ರೂಪೇಶ್​ ಶೆಟ್ಟಿ ಅವರನ್ನು ಸಾನ್ಯಾ ಐಯ್ಯರ್​ ಅವರು ರೂಪಿ ಎಂದು ಕರೆದರು. ಅದು ಸುದೀಪ್​ ಅವರ ಗಮನ ಸೆಳೆಯಿತು.

ಇದನ್ನೂ ಓದಿ
Image
ಪ್ರೇಯಸಿ ನಂದಿನಿ ಔಟ್​ ಆದ್ಮೇಲೆ ಸಾನ್ಯಾ ಜತೆ ಹೆಚ್ಚಿತು ಜಶ್ವಂತ್​ ಸಲುಗೆ; ರೂಪೇಶ್​ಗೆ ಟೆನ್ಷನ್​ ಶುರು
Image
BBK: ‘ಬಿಗ್ ಬಾಸ್​ನಲ್ಲಿ ರೂಪೇಶ್​, ಸೋಮಣ್ಣ, ರಾಕೇಶ್​ ಟಾಪ್​ 3 ಆಗ್ತಾರೆ’: ಭವಿಷ್ಯ ನುಡಿದ ಅಕ್ಷತಾ ಕುಕ್ಕಿ
Image
ಬಿಗ್ ಬಾಸ್​ ಸಿನಿಮಾದಲ್ಲಿ ಸೋಮಣ್ಣ ಹೀರೋ, ಸೋನು ಹೀರೋಯಿನ್​, ರಾಕೇಶ್​ ವಿಲನ್​: ಕಾಮಿಡಿ ಯಾರು?
Image
Sanya Iyer: ಸಾನ್ಯಾ ಐಯ್ಯರ್​ ಎದುರು ಮನದ ಮಾತು ತೆರೆದಿಟ್ಟ ರೂಪೇಶ್​ ಶೆಟ್ಟಿ​: ಪಾಸಿಟಿವ್​ ಆಗಿ ಪ್ರತಿಕ್ರಿಯಿಸಿದ ನಟಿ

‘ಕೊನೇ ದಿನದ ರಾತ್ರಿ ನಿದ್ರೆ ಬಂತಾ’ ಎಂದು ಸುದೀಪ್​ ಕೇಳಿದರು. ‘ಕೊನೆಯಲ್ಲಿ ಮಲಗಿದ್ದು ನಾನು ಮತ್ತು ರೂಪಿ’ ಎಂದು ಸಾನ್ಯಾ ಹೇಳಿದರು. ‘ರೂಪಿ ಎಂದರೆ ಯಾರು’ ಎಂದು ಪ್ರಶ್ನೆ ಕಿಚ್ಚನ ಕಡೆಯಿಂದ ಬಂತು. ‘ರೂಪಿ ಎಂದರೆ ರೂಪೇಶ್’ ಎಂದರು ಸಾನ್ಯಾ. ‘ಅವರು ನಿಮಗೆ ಏನಂಥ ಕರೆದರೆ ಇಷ್ಟ’ ಎಂದು ಸಾನ್ಯಾಗೆ ಸುದೀಪ್​ ಪ್ರಶ್ನಿಸಿದರು. ‘ಸಾನ್ಯಾ ಶೆಟ್ಟಿ ಅಂತ ಬಂತು ಸರ್​. ಅದು ನನಗೆ ಸಖತ್​ ಇಷ್ಟ ಆಯ್ತು’ ಎಂದು ಸಾನ್ಯಾ ಅವರು ನೇರವಾಗಿ ಹೇಳಿದ್ದಾರೆ. ‘ನಾನು ಇಲ್ಲಿ ಏನೋ ಬೇರೆ ಪ್ರೊಫೆಷನ್​ ಶುರು ಮಾಡಿದ್ದೇನೆ ಎಂಬ ಫೀಲಿಂಗ್​ ಬರುತ್ತಿದೆ’ ಎಂದು ಸುದೀಪ್​ ಕೇಳಿದ್ದು ಕೇಳಿ ಎಲ್ಲರೂ ನಕ್ಕಿದ್ದಾರೆ.

ಫಿನಾಲೆ ವಾರದವರೆಗೂ ಬಂದ ಸೋನು ಶ್ರೀನಿವಾಸ್​ ಗೌಡ ಮತ್ತು ರಾಕೇಶ್​ ಅಡಿಗ ನಡುವೆಯೂ ಅದೇ ರೀತಿಯ ಆತ್ಮೀಯತೆ ಇತ್ತು. ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ಕಾಲ ಅವರಿಬ್ಬರು ಜೊತೆಯಾಗಿ ಇರುತ್ತಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:33 pm, Fri, 16 September 22

Follow Us
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?