AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಕಣ್ಣು ಯಾವ ಬಣ್ಣದ್ದು? ನಿಮ್ಮ ಕಣ್ಣಿನ ಬಣ್ಣ ವ್ಯಕ್ತಿತ್ವವನ್ನು ವಿವರಿಸುತ್ತದೆ ಗೊತ್ತೇ?

ಒಬ್ಬೊಬ್ಬರ ಕಣ್ಣು ಒಂದೊಂದು ಬಣ್ಣದಲ್ಲಿರುತ್ತದೆ. ಹೆಚ್ಚು ಜನರ ಕಣ್ಣು ಕಪ್ಪಾಗಿದ್ದರೆ, ಇನ್ನು ಕೆಲವರ ಕಣ್ಣು, ನೀಲಿ, ತಿಳಿ ಹಸಿರು, ಬೂದು ಬಣ್ಣದಲ್ಲಿ ಕಂಡು ಬರುತ್ತದೆ. ಈ ಬಣ್ಣದ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ಕಂಡು ಹಿಡಿಯಬಹುದು.

ನಿಮ್ಮ ಕಣ್ಣು ಯಾವ ಬಣ್ಣದ್ದು? ನಿಮ್ಮ ಕಣ್ಣಿನ ಬಣ್ಣ ವ್ಯಕ್ತಿತ್ವವನ್ನು ವಿವರಿಸುತ್ತದೆ ಗೊತ್ತೇ?
ಕಣ್ಣಿನ ಬಣ್ಣ
TV9 Web
| Edited By: |

Updated on: Jul 28, 2021 | 8:03 AM

Share

ನಮ್ಮ ದೇಹದ ಅತ್ಯಂತ ಮುಖ್ಯವಾದ ಹಾಗೂ ಸೂಕ್ಷ್ಮವಾದ ಅಂಗ ಕಣ್ಣು. ಇಡೀ ಜಗತ್ತನ್ನೇ ನೋಡುವ ಅದೃಷ್ಟ ಕಣ್ಣಿನಿಂದ ಸಿಗುತ್ತದೆ. ವ್ಯಕ್ತಿಯ ಭಾವನೆಯನ್ನು ಕಣ್ಣಿನಿಂದ ಕಂಡು ಹಿಡಿಯಬಹುದು. ನೋವಾದಾಗ, ಸಿಟ್ಟು ಬಂದಾಗ, ಬೇಸರವಾದಾಗ ಹೀಗೆ ಎಲ್ಲಾ ಭಾವನೆಗಳನ್ನು ತತ್ ಕ್ಷಣದಲ್ಲಿ ಕಂಡು ಹಿಡಿಯಬಹುದು.

ಒಬ್ಬೊಬ್ಬರ ಕಣ್ಣು ಒಂದೊಂದು ಬಣ್ಣದಲ್ಲಿರುತ್ತದೆ. ಹೆಚ್ಚು ಜನರ ಕಣ್ಣು ಕಪ್ಪಾಗಿದ್ದರೆ, ಇನ್ನು ಕೆಲವರ ಕಣ್ಣು, ನೀಲಿ, ತಿಳಿ ಹಸಿರು, ಬೂದು ಬಣ್ಣದಲ್ಲಿ ಕಂಡು ಬರುತ್ತದೆ. ಈ ಬಣ್ಣದ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ಕಂಡು ಹಿಡಿಯಬಹುದು. ಹಾಗಿರುವಾಗ ನಿಮ್ಮ ಕಣ್ಣು ಯಾವ ಬಣ್ಣದಲ್ಲಿದೆ? ಕಣ್ಣಿನ ಬಣ್ಣದ ಮೂಲಕ ವ್ಯಕ್ತಿಯ ಯಾವ ವ್ಯಕ್ತಿತ್ವವನ್ನು ಹೊಂದಿರುತ್ತಾನೆ ಎಂಬುದನ್ನು ತಿಳಿಯಿರಿ.

ಕಪ್ಪು ಕಣ್ಣು ಹೆಚ್ಚು ಜನರ ಕಣ್ಣು ಹೆಚ್ಚು ಕಪ್ಪಾಗಿರುತ್ತದೆ. ಅಂತವರು ಹೆಚ್ಚು ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹರು. ಜನರಿಗೆ ಮೋಸ ಮಾಡಲು ಎಂದೂ ಇಷ್ಟಪಡುವುದಿಲ್ಲ. ಕಪ್ಪು ಕಣ್ಣುಳ್ಳ ಜನರನ್ನು ಎಂದೂ ನಂಬಬಹುದು. ಕಪ್ಪು ಕಣ್ಣುಳ್ಳವರು ಶಾಂತ ಸ್ವಭಾವದವರಾಗಿರುತ್ತಾರೆ ಹಾಗೂ ರಹಶ್ಯಗಳನ್ನು ಕಾಪಾಡಿಕೊಳ್ಳುತ್ತಾರೆ. ಹಾಗಾಗಿ ಹೆಚ್ಚು ನಂಬಿಕೆ ಇಡಬಹುದು.

ಕಂದು ಕಣ್ಣು ಹೆಚ್ಚಿನ ಜನರು ಕಣ್ಣು ಕಂದು ಬಣ್ಣದ್ದಾಗಿರುತ್ತದೆ. ಕಂದು ಬಣ್ಣದ ಜನರು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಾರೆ. ನೇರವಾದ ಮಾತಿನ ಜತೆಗೆ ಸದೃಢರಾಗಿರುತ್ತಾರೆ. ತಮ್ಮ ಗುರಿಯನ್ನು ಸಾಧಿಸಲು ಎಂದೂ ಪ್ರಯತ್ನದಲ್ಲಿರುತ್ತಾರೆ. ಹೆಚ್ಚು ಸೃಜನಶೀಲರಾಗಿರುತ್ತಾರೆ ಜತೆಗೆ ಆಕರ್ಷಕವಾಗಿರುವುದರಿಂದ ಜನರನ್ನು ಬಹುಬೇಗ ಗೆಲ್ಲುತ್ತಾರೆ.

ತಿಳಿ ಹಸಿರು ಕಣ್ಣು ತಿಳಿ ಹಸಿರು ಬಣ್ಣದ ಕಣ್ಣಿರುವವರು ಕಂಡು ಬರುವುದು ತುಂಬಾ ವಿರಳ. ಉಳಿದವರಿಗೆ ಹೋಲಿಸಿದರೆ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಾರೆ. ಅದಾಗ್ಯೂ ಹೆಚ್ಚು ಸುಂದರವಾಗಿರುತ್ತಾರೆ. ಇವರು ಹೆಚ್ಚು ಬುದ್ದಿವಂತರಾಗಿರುವುದರಿಂದ ಜನರ ಎದುರು ಮೆಚ್ಚುಗೆ ಗಳಿಸಿಕೊಳ್ಳುತ್ತಾರೆ.

ನೀಲಿ ಕಣ್ಣುಗಳು ಹಸಿರು ಬಣ್ಣದ ಕಣ್ಣುಗಳಂತೆಯೇ ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವವರೂ ಸಹ ಕಾಣಸಿಗುವುದು ಅತ್ಯಂತ ವಿರಳ. ನೀಲಿ ಕಣ್ಣು ಉಳ್ಳವರು ಆಂತ ಸ್ವಭಾವದವರು ಹಾಗೂ ತೀಕ್ಷ್ಣವಾದ ಮನಸ್ಸುಳ್ಳವರಾಗಿರುತ್ತಾರೆ. ಇವರು ಯಾರಿಗೂ ನೋವುಂಟು ಮಾಡುವ ಮನಸ್ಸುಳ್ಳವರಲ್ಲ. ಇವರು ಹೆಚ್ಚು ಹೃದಯವಂತರು ಹಾಗೂ ಸತ್ಯವಂತರು.

ಬೂದು ಕಣ್ಣುಗಳು ಬೂದು ಕಣ್ಣುಗಳಿರುವವರನ್ನು ಪ್ರಣಯದ ರಾಜ ಎಂದು ಕರೆಯುತ್ತಾರೆ. ಪ್ರಣಯದ ವಿಷಯ ಬಂದರೆ ಇವರನ್ನು ಸೋಲಿಸುವವರೇ ಇಲ್ಲ. ಸಣ್ಣ ಸಣ್ಣ ವಿಷಯಕ್ಕೂ ಇವರು ಕೋಪಗೊಳ್ಳುವುದಿಲ್ಲ. ಎಲ್ಲವನ್ನೂ ಸುಲಭದಲ್ಲಿ ನಿಭಾಯಿಸುತ್ತಾರೆ. ಸ್ವಭಾವತಃ ಇವರು ಹೆಚ್ಚು ಬಲಶಾಲಿ ಮತ್ತು ವಿನಮ್ರ ಭಾವದವರಾಗಿರುತ್ತಾರೆ.

ಇದನ್ನೂ ಓದಿ:

Viral Video: ಕದ್ದು..ಕದ್ದು ಕಣ್ಣು ಹೊಡೆದು ಕ್ಯಾಮರಾಕ್ಕೆ ಪೋಸ್​ ಕೊಟ್ಟ ವಧು; ವರನಿಗೇನೂ ಗೊತ್ತೇ ಆಗ್ಲಿಲ್ಲ !

Viral Video: ಮದುವೆ ವಾರ್ಷಿಕೋತ್ಸವಕ್ಕೆ ಪತಿಯ ಉಡುಗೊರೆ; ಮತ್ತೊಮ್ಮೆ ಕಣ್ಣುಜ್ಜಿ ನೋಡಿ ಇದು ನಿಜವಾಗಿಯೂ ಚಿನ್ನದ ಹಾರವೇ?

ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ