AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್-19 ಭಾರತೀಯರ ಜೀವಿತಾವಧಿಯನ್ನು 2.6 ವರ್ಷ ಕಡಿತಗೊಳಿಸಿದೆ; ಅಧ್ಯಯನ ವರದಿ ತಳ್ಳಿದ ಸರ್ಕಾರ

ಸೈನ್ಸ್ ಅಡ್ವಾನ್ಸಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು 2019 ಮತ್ತು 2020 ರ ನಡುವೆ ಭಾರತವು 2.6 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಂಡಿದೆ ಎಂದು ಹೇಳಿದೆ. ಮುಸ್ಲಿಮರು ಮತ್ತು ಪರಿಶಿಷ್ಟ ಪಂಗಡಗಳಂತಹ ಸಾಮಾಜಿಕವಾಗಿ ಹಿಂದುಳಿದ ಗುಂಪುಗಳಲ್ಲಿ ಇದು ಜಾಸ್ತಿ. ಪುರುಷರಿಗೆ ಹೋಲಿಸಿದರೆ (2.1 ವರ್ಷಗಳು)ಮಹಿಳೆಯರು ದೊಡ್ಡ ಕುಸಿತವನ್ನು (3.1 ವರ್ಷಗಳು) ಕಂಡಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ.

ಕೋವಿಡ್-19 ಭಾರತೀಯರ ಜೀವಿತಾವಧಿಯನ್ನು 2.6 ವರ್ಷ ಕಡಿತಗೊಳಿಸಿದೆ; ಅಧ್ಯಯನ ವರದಿ ತಳ್ಳಿದ ಸರ್ಕಾರ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:Jul 20, 2024 | 5:46 PM

Share

ದೆಹಲಿ ಜುಲೈ 20: 2020ರಲ್ಲಿ ಕೋವಿಡ್ -19 (Covid 19) ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ ಜೀವಿತಾವಧಿ ಗಮನಾರ್ಹವಾಗಿ ಕುಸಿದಿದೆ ಎಂದು ಹೇಳುವ ಶೈಕ್ಷಣಿಕ ಜರ್ನಲ್ ಸೈನ್ಸ್ ಅಡ್ವಾನ್ಸಸ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಸಂಶೋಧನೆಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (Union ministry of health and family welfare) ತಳ್ಳಿಹಾಕಿದೆ. ಸಚಿವಾಲಯವು ಈ ಅಧ್ಯಯನ ವರದಿಯನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

ಸೈನ್ಸ್ ಅಡ್ವಾನ್ಸಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು 2019 ಮತ್ತು 2020 ರ ನಡುವೆ ಭಾರತೀಯರು 2.6 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದೆ. ಮುಸ್ಲಿಮರು ಮತ್ತು ಪರಿಶಿಷ್ಟ ಪಂಗಡಗಳಂತಹ ಸಾಮಾಜಿಕವಾಗಿ ಹಿಂದುಳಿದ ಗುಂಪುಗಳಲ್ಲಿ ಇದು ಜಾಸ್ತಿ. ಪುರುಷರಿಗೆ ಹೋಲಿಸಿದರೆ (2.1 ವರ್ಷಗಳು)ಮಹಿಳೆಯರು ದೊಡ್ಡ ಕುಸಿತವನ್ನು (3.1 ವರ್ಷಗಳು) ಕಂಡಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ.

ಅಧ್ಯಯನದಲ್ಲಿ ಹಲವಾರು ನ್ಯೂನತೆಗಳನ್ನು ಎತ್ತಿ ತೋರಿಸಿರುವ ಆರೋಗ್ಯ ಸಚಿವಾಲಯವು ಲೇಖಕರು 2021 ರ ಜನವರಿ ಮತ್ತು ಏಪ್ರಿಲ್ ನಡುವೆ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ನಿಂದ ಕುಟುಂಬಗಳ ಪ್ರತಿನಿಧಿಯಲ್ಲದ ಉಪವಿಭಾಗವನ್ನು ಇಡೀ ದೇಶಕ್ಕೆ ಮರಣ ಪ್ರಮಾಣವನ್ನು ವಿವರಿಸಲು ಬಳಸಿದ್ದಾರೆ. NFHS ಮಾದರಿಯು ಸಂಪೂರ್ಣವಾಗಿ ಪರಿಗಣಿಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಕೇವಲ 14 ರಾಜ್ಯಗಳಿಂದ ಕೇವಲ 23% ಕುಟುಂಬಗಳ ವಿಶ್ಲೇಷಣೆಯು ರಾಷ್ಟ್ರೀಯ ಮರಣ ಪ್ರವೃತ್ತಿಯನ್ನು ನಿಖರವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ಸಚಿವಾಲಯ ವಾದಿಸಿದೆ.

ಕೋವಿಡ್ -19 ಸಾಂಕ್ರಾಮಿಕದ ಉತ್ತುಂಗದಲ್ಲಿ ಡೇಟಾವನ್ನು ಸಂಗ್ರಹಿಸಲಾಗಿರುವುದರಿಂದ ಸಂಭಾವ್ಯ ಆಯ್ಕೆ ಮತ್ತು ವರದಿ ಮಾಡುವ ಪಕ್ಷಪಾತಗಳಿಗಾಗಿ ಸಚಿವಾಲಯವು ಅಧ್ಯಯನವನ್ನು ಟೀಕಿಸಿದೆ. ಭಾರತದಲ್ಲಿನ ನಾಗರಿಕ ನೋಂದಣಿ ವ್ಯವಸ್ಥೆ (CRS) ದೃಢವಾಗಿದೆ. ಇದು 99% ಕ್ಕಿಂತ ಹೆಚ್ಚು ಸಾವುಗಳ ಲೆಕ್ಕಾಚಾರವನ್ನು ಇದು ಇಟ್ಟುಕೊಂಡಿದೆ ಎಂದು ಸಚಿವಾಲಯ ಹೇಳಿದೆ.  ಈ ವರದಿಯು 2015 ರಲ್ಲಿ 75% ರಿಂದ 2020 ರಲ್ಲಿ 99% ಕ್ಕೆ ನಿರಂತರವಾಗಿ ಹೆಚ್ಚುತ್ತಿದೆ” ಎಂದು ಅದು ಹೇಳಿದೆ.

2019 ಕ್ಕೆ ಹೋಲಿಸಿದರೆ 2020 ರಲ್ಲಿ ಸಾವಿನ ದಾಖಲಾತಿಗಳು ಸರಿಸುಮಾರು 474,000 ರಷ್ಟು ಹೆಚ್ಚಾಗಿದೆ ಎಂದು ಸರ್ಕಾರ ಗಮನಿಸಿದೆ. ಇದು ಹಿಂದಿನ ವರ್ಷಗಳಿಗೆ ಅನುಗುಣವಾಗಿರುತ್ತದೆ. ಇದಕ್ಕೆ ಸಾಂಕ್ರಾಮಿಕ ರೋಗ ಮಾತ್ರ ಕಾರಣವಲ್ಲ.

“ಹೆಚ್ಚುವರಿ ಸಂಖ್ಯೆಯು CRS ನಲ್ಲಿ ಸಾವಿನ ನೋಂದಣಿಯ ಹೆಚ್ಚುತ್ತಿರುವ ಪ್ರವೃತ್ತಿಯಿಂದಾಗಿ (ಇದು 2019 ರಲ್ಲಿ 92% ಆಗಿತ್ತು) ಮತ್ತು ನಂತರದ ವರ್ಷದಲ್ಲಿ ಹೆಚ್ಚಿನ ಜನಸಂಖ್ಯೆಯೇ ಇದಕ್ಕೆ ಕಾರಣ ” ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಕೊಡಲಿಯಿಂದ ಒಂದೇ ಒಂದು ಏಟು ಕೊಟ್ಟು ಹುಲಿಯನ್ನು ಹತ್ಯೆ ಮಾಡಿ, ಶೌರ್ಯ ಪ್ರಶಸ್ತಿ ಪಡೆದಿದ್ದ ಮಹಿಳೆ ಸಾವು

ದೇಶಾದ್ಯಂತ ದೊಡ್ಡ ಮತ್ತು ವೈವಿಧ್ಯಮಯ ಜನಸಂಖ್ಯೆಯನ್ನು ಒಳಗೊಂಡಿರುವ ಮಾದರಿ ನೋಂದಣಿ ವ್ಯವಸ್ಥೆ (ಎಸ್‌ಆರ್‌ಎಸ್) 2019 ಕ್ಕೆ ಹೋಲಿಸಿದರೆ 2020 ರಲ್ಲಿ ಯಾವುದೇ ಹೆಚ್ಚಿನ ಮರಣವನ್ನು ವರದಿ ಮಾಡಿಲ್ಲ ಎಂದು ಅದು ಗಮನಸೆಳೆದಿದೆ. ವಯಸ್ಸು ಮತ್ತು ಲಿಂಗ-ಸಂಬಂಧಿತ ಮರಣದ ಹೆಚ್ಚಳದ ಕುರಿತು ಅಧ್ಯಯನದ ಸಂಶೋಧನೆಗಳನ್ನು ಸರ್ಕಾರವು ಟೀಕಿಸಿದೆ . ಅಧಿಕೃತ ಅಂಕಿಅಂಶಗಳ ಪ್ರಕಾರ, ಕೋವಿಡ್-19 ಮರಣವು ಪುರುಷರು ಮತ್ತು ಹಿರಿಯ ವಯಸ್ಸಿನ ಗುಂಪುಗಳಲ್ಲಿ ಹೆಚ್ಚಾಗಿದೆ. ಅಧ್ಯಯನ ವರದಿಯು ಕಿರಿಯ ವ್ಯಕ್ತಿಗಳು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಿತ್ತು.

“ಪ್ರಕಟಿತ ಪತ್ರಿಕೆಯಲ್ಲಿನ ಈ ಅಸಮಂಜಸ ಮತ್ತು ವಿವರಿಸಲಾಗದ ಫಲಿತಾಂಶಗಳು ಅದರ ಹಕ್ಕುಗಳ ಮೇಲಿನ ವಿಶ್ವಾಸವನ್ನು ಮತ್ತಷ್ಟು ಕಡಿಮೆಗೊಳಿಸುತ್ತವೆ” ಎಂದು ಸಚಿವಾಲಯ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Sat, 20 July 24

Follow Us
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ