ಯಾರಿಗೂ ತಂದೆಯಿಂದ ಈ ರೀತಿ ಆಗಬಾರದು; ಖುಷ್ಬೂಗೆ ಆಗಿತ್ತು ಲೈಂಗಿಕ ದೌರ್ಜನ್ಯ

ಯಾವುದೇ ಹುಡುಗಿಗಾದರೂ ತಂದೆ ಹೀರೋ ಆಗಬೇಕು. ತಂದೆ ತೋರುವ ಆದರ್ಶಗಳಿಂದ ಅವಳು ಬೆಳೆಯ ಬೇಕು. ಪ್ರತಿ ಹೆಜ್ಜೆಯಲ್ಲೂ ತಂದೆಯ ಮಾರ್ಗದರ್ಶನ ಬೇಕು. ಎಲ್ಲೇ ಹೋದರೂ ತಂದೆ ಇದ್ದಾರೆ ಎನ್ನುವ ಧೈರ್ಯ ಬೇಕು. ಆದರೆ, ಖುಷ್ಬೂ ಸುಂದರ್​ಗೆ ಆ ರೀತಿ ಆಗಲೇ ಇಲ್ಲ ಅನ್ನೋದು ಬೇಸರದ ವಿಚಾರವೇ ಸರಿ.

ಯಾರಿಗೂ ತಂದೆಯಿಂದ ಈ ರೀತಿ ಆಗಬಾರದು; ಖುಷ್ಬೂಗೆ ಆಗಿತ್ತು ಲೈಂಗಿಕ ದೌರ್ಜನ್ಯ
ಖುಷ್ಬೂ
Follow us
| Updated By: ರಾಜೇಶ್ ದುಗ್ಗುಮನೆ

Updated on:Sep 29, 2024 | 8:19 AM

ನಟಿ ಖಷ್ಬೂ ಸುಂದರ್ ಅವರಿಗೆ ಇಂದು (ಸೆಪ್ಟೆಂಬರ್ 29) ಜನ್ಮದಿನ. ಅವರು ನಟನೆ ಹಾಗೂ ರಾಜಕೀಯ ಎರಡರಲ್ಲೂ ತೊಡಗಿಕೊಂಡಿರುವುದು ಗೊತ್ತೇ ಇದೆ. ಅವರಿಗೆ ಈ ಮೊದಲು ಆದ ಒಂದು ಕಹಿ ಘಟನೆಯನ್ನು ಅವರು ಮರೆಯುತ್ತಿಲ್ಲ. ಅವರ ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಆಗಿತ್ತು. ತಂದೆಯ ಕಾಮಕ್ಕೆ ಇವರು ಕಷ್ಟಪಡಬೇಕಾಯಿತು. ಈ ಘಟನೆಯನ್ನು ಅವರು ಅನೇಕ ಬಾರಿ ನೆನಪಿಸಿಕೊಂಡು ಕಣ್ಣೀರು ಹಾಕಿದ್ದರು. ಅವರ ಜನ್ಮದಿನದ ಪ್ರಯುಕ್ತ ಆ ಘಟನೆಯ ಬಗ್ಗೆ ನಿಮಗೆ ನಾವು ಹೇಳುತ್ತಿದ್ದೇವೆ.

ಯಾವುದೇ ಹುಡುಗಿಗಾದರೂ ತಂದೆ ಹೀರೋ ಆಗಬೇಕು. ತಂದೆ ತೋರುವ ಆದರ್ಶಗಳಿಂದ ಅವಳು ಬೆಳೆಯ ಬೇಕು. ಪ್ರತಿ ಹೆಜ್ಜೆಯಲ್ಲೂ ತಂದೆಯ ಮಾರ್ಗದರ್ಶನ ಬೇಕು. ಎಲ್ಲೇ ಹೋದರೂ ತಂದೆ ಇದ್ದಾರೆ ಎನ್ನುವ ಧೈರ್ಯ ಬೇಕು. ಆದರೆ, ಖುಷ್ಬೂ ಸುಂದರ್​ಗೆ ಆ ರೀತಿ ಆಗಲೇ ಇಲ್ಲ ಅನ್ನೋದು ಬೇಸರದ ವಿಚಾರವೇ ಸರಿ. ಅವರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ‘ಒಂದು ವಿಚಾರವನ್ನು ಮರೆಯಲು ಸಾಕಷ್ಟು ಸಮಯ ಬೇಕು. ನಾನು ಸಣ್ಣವನಿದ್ದಾಗ ತಂದೆಯಿಂದಲೇ ದೌರ್ಜನ್ಯಕ್ಕೆ ಒಳಗಾದೆ’ ಎಂದಿದ್ದಾರೆ ಅವರು.

‘ಪುರುಷನಾಗಿ ಆತ ಪತ್ನಿಗೆ ಹೊಡೆಯೋ ಜನ್ಮಸಿದ್ಧ ಹಕ್ಕು ಎಂದು ಅವನು ಭಾವಿಸಿದಂತೆ ಇತ್ತು. ಅದೇ ರೀತಿ ಮಗಳಿಗೆ ಲೈಂಗಿಕ ದೌರ್ಜನ್ಯ ನೀಡೋದು ಅವನ ಕರ್ತವ್ಯ ಎಂದು ಭಾವಿಸಿದ್ದ. ಇದನ್ನು ಪ್ರಶ್ನೆ ಮಾಡಲು ನನಗೆ ಏಳು ವರ್ಷ ಬೇಕಾಯಿತು. ನನ್ನ ಮಾತನ್ನು ನನ್ನ ತಾಯಿ ನಂಬುವುದಿಲ್ಲ ಎನ್ನುವ ಭಯ ಇತ್ತು’ ಎಂದಿದ್ದಾರೆ ಅವರು.

ಏನೇ ಆದರೂ ನನ್ನ ಪತಿ ದೇವರು ಎಂದು ಖುಷ್ಬೂ ಅವರ ತಾಯಿ ಭಾವಿಸುತ್ತಿದ್ದರು. ಆ ರೀತಿಯ ಮನಸ್ಥಿತಿ ಅವರದ್ದಾಗಿತ್ತು. ತಂದೆಯ ವಿರುದ್ಧ ತಿರುಗಿಬಿದ್ಧ ನಂತರ ಇಡೀ ಕುಟುಂಬವನ್ನು ತಂದೆ ಬಿಟ್ಟುಬಿಟ್ಟನು. ಮುಂದೇನು ಎನ್ನುವ ಪ್ರಶ್ನೆ ಅವರನ್ನು ಕಾಡಲು ಪ್ರಾರಂಭಿಸಿತು.

ಇದನ್ನೂ ಓದಿ: ‘ಲೈಂಗಿಕ ದೌರ್ಜನ್ಯದ ಬಗ್ಗೆ ತಕ್ಷಣಕ್ಕೆ ಹೇಳಿದರೆ ತನಿಖೆಗೆ ಸಹಾಯ ಆಗುತ್ತದೆ’; ಖುಷ್ಬೂ ಸುಂದರ್

ಖುಷ್ಬೂ ಅವರು ಶ್ರೇಷ್ಠ ನಟಿ ಎನಿಸಿಕೊಂಡಿದ್ದಾರೆ. ಅವರು ಕನ್ನಡದಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ರವಿಚಂದ್ರನ್ ಜೊತೆಗಿನ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟ ಆಗುತ್ತದೆ.  ‘ರಣಧೀರ’ ಅವರು ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ. ‘ಅಂಜದ ಗಂಡು’, ‘ಯುಗ ಪುರುಷ’, ‘ಪ್ರೇಮಾಗ್ನಿ’ ಸೇರಿ ಅನೇಕ ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 1996ರಲ್ಲಿ ಬಂದ ‘ಜೀವನದಿ’ ಸಿನಿಮಾ ಗಮನ ಸೆಳೆಯಿತು. 2010ರ ‘ಜನನಿ’ ಬಳಿಕ ಅವರು ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:18 am, Sun, 29 September 24

ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ