AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತ ವಿದ್ಯುತ್ ಪೂರೈಕೆ ನಡುವೆಯೂ 7 ವರ್ಷಗಳ ಬಳಿಕ ಲಾಭದ ಹಾದಿಗೆ ಬೆಸ್ಕಾಂ! ₹293.62 ಕೋಟಿ ವಾರ್ಷಿಕ ಲಾಭ

ಏಳು ವರ್ಷಗಳ ಬಳಿಕ ಬೆಸ್ಕಾಂ 2025-26ನೇ ಸಾಲಿನಲ್ಲಿ 293.62 ಕೋಟಿ ರೂ. ವಾರ್ಷಿಕ ಲಾಭ ದಾಖಲಿಸಿದೆ. ವಿದ್ಯುತ್ ಖರೀದಿ ವೆಚ್ಚ ಇಳಿಕೆ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸುಂಕ ಆದೇಶಗಳು ಹಾಗೂ ವೆಚ್ಚ ನಿಯಂತ್ರಣ ಕ್ರಮಗಳು ಲಾಭಕ್ಕೆ ಪ್ರಮುಖ ಕಾರಣವಾಗಿವೆ. ಉಚಿತ ವಿದ್ಯುತ್ ಯೋಜನೆ ನಡುವೆಯೂ ಬೆಸ್ಕಾಂನ ಈ ಸಾಧನೆ ಗಮನ ಸೆಳೆದಿದೆ.

ಉಚಿತ ವಿದ್ಯುತ್ ಪೂರೈಕೆ ನಡುವೆಯೂ 7 ವರ್ಷಗಳ ಬಳಿಕ ಲಾಭದ ಹಾದಿಗೆ ಬೆಸ್ಕಾಂ! ₹293.62 ಕೋಟಿ ವಾರ್ಷಿಕ ಲಾಭ
ಸಾಂದರ್ಭಿಕ ಚಿತ್ರImage Credit source: tv9
ಗಣಪತಿ ಶರ್ಮಾ
|

Updated on: Sep 11, 2026 | 8:28 AM

Share

ಮುಖ್ಯಾಂಶಗಳು

  • ಏಳು ವರ್ಷಗಳ ಬಳಿಕ ಬೆಸ್ಕಾಂಗೆ ಲಾಭ
  • ₹293.62 ಕೋಟಿ ವಾರ್ಷಿಕ ಲಾಭ ದಾಖಲು
  • ಉಚಿತ ವಿದ್ಯುತ್ ನಡುವೆಯೂ ಲಾಭ!

ಬೆಂಗಳೂರು, ಸೆಪ್ಟೆಂಬರ್ 11: ಗೃಹ ಜ್ಯೋತಿ ಯೋಜನೆ ಅಡಿ ಗೃಹ ಬಳಕೆಯ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುತ್ತಿದ್ದರೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕೊನೆಗೂ ಲಾಭದ ಹಾದಿಗೆ ಮರಳಿದೆ! ಸತತ ಏಳು ವರ್ಷಗಳ ನಷ್ಟದ ಬಳಿಕ ಬೆಸ್ಕಾಂ 2025-26ನೇ ಸಾಲಿನಲ್ಲಿ 293.62 ಕೋಟಿ ರೂ. ವಾರ್ಷಿಕ ಲಾಭ ದಾಖಲಿಸಿರುವುದಾಗಿ ವರದಿಯಾಗಿದೆ. 2017-18ರಲ್ಲಿ 568.29 ಕೋಟಿ ರೂ. ಲಾಭ ಗಳಿಸಿದ್ದ ಬೆಸ್ಕಾಂ, ಆ ಬಳಿಕ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.

ಬೆಸ್ಕಾಂ ಲಾಭದ ಹಾದಿಗೆ ಮರಳಲು ಕಾರಣವೇನು?

2025-26ನೇ ಸಾಲಿನಲ್ಲಿ ಬೆಸ್ಕಾಂ ಲಾಭದ ಹಾದಿಗೆ ಮರಳಲು ವಿದ್ಯುತ್ ಖರೀದಿ ವೆಚ್ಚದಲ್ಲಿನ ಇಳಿಕೆ ಹಾಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC)ದ ಸುಂಕ ಪರಿಷ್ಕರಣೆ ಆದೇಶಗಳು ಪ್ರಮುಖ ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಇಆರ್​ಸಿಯ ಸುಂಕ ಆದೇಶಗಳು ವಿದ್ಯುತ್ ದರವನ್ನು ಸಮಂಜಸವಾಗಿ ಹೆಚ್ಚಿಸುವುದರ ಜೊತೆಗೆ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ (FPPCA) ಶುಲ್ಕವನ್ನು ನಿಯಮಿತವಾಗಿ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿವೆ.

ಬೆಸ್ಕಾಂ ಲಾಭಕ್ಕೆ ಮತ್ತೊಂದು ಪ್ರಮುಖ ಕಾರಣ

ಬೆಸ್ಕಾಂನ ಒಟ್ಟು ವೆಚ್ಚದಲ್ಲಿ ಸುಮಾರು ಶೇ 80ರಷ್ಟು ಪಾಲು ವಿದ್ಯುತ್ ಖರೀದಿಗೆ ಹೋಗುತ್ತದೆ. ಉಷ್ಣ ವಿದ್ಯುತ್‌ಗಿಂತ ಜಲವಿದ್ಯುತ್ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವುದರಿಂದ, ಈ ಬಾರಿ ಬೆಸ್ಕಾಂಗೆ ಜಲವಿದ್ಯುತ್ ಹಂಚಿಕೆ ಹೆಚ್ಚಾಗಿದ್ದು, ಉಷ್ಣ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಇದರಿಂದ ವಿದ್ಯುತ್ ಖರೀದಿ ವೆಚ್ಚ ಗಣನೀಯವಾಗಿ ಇಳಿಕೆಯಾಗಿದೆ.

ಇದರ ಜೊತೆಗೆ ವೆಚ್ಚ ಕಡಿತ ಹಾಗೂ ಆದಾಯ ಹೆಚ್ಚಳಕ್ಕೆ ಬೆಸ್ಕಾಂ ಹಲವು ಕ್ರಮಗಳನ್ನು ಕೈಗೊಂಡಿದೆ. ಸಾಲಗಳ ಮರುಹಣಕಾಸು (ಲೋನ್ ರಿಫೈನಾನ್ಸಿಂಗ್) ಮೂಲಕ ಬಡ್ಡಿ ವೆಚ್ಚವನ್ನು ಶೇ 1.5ರಿಂದ 2ರಷ್ಟು ಕಡಿಮೆ ಮಾಡಲಾಗಿದ್ದು, ಇದರಿಂದ ನೂರಾರು ಕೋಟಿ ರೂಪಾಯಿ ಉಳಿತಾಯವಾಗಿದೆ.

ಅದೇ ರೀತಿ, ಪೂರೈಕೆದಾರರು ಬಿಲ್ ಸಲ್ಲಿಸಿದ ದಿನವೇ ಪಾವತಿ ಮಾಡಿದರೆ ಶೇ 4ರವರೆಗೆ ರಿಯಾಯಿತಿ ಪಡೆಯುವ ಅವಕಾಶವನ್ನು ಬೆಸ್ಕಾಂ ಬಳಸಿಕೊಂಡಿದೆ. ಇದರಿಂದ ಸುಮಾರು 100 ಕೋಟಿ ರೂ. ಉಳಿತಾಯವಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ವೆಚ್ಚವನ್ನು ಉದ್ದೇಶಪೂರ್ವಕವಾಗಿ ನಿಯಂತ್ರಿಸುವುದರ ಜೊತೆಗೆ ಹಲವು ಸಣ್ಣಪುಟ್ಟ ಹಣಕಾಸು ನಿರ್ವಹಣಾ ಕ್ರಮಗಳನ್ನು ಕೈಗೊಂಡಿದ್ದರಿಂದ ನಷ್ಟದಿಂದ ಲಾಭದತ್ತ ಸಾಗಲು ಸಾಧ್ಯವಾಗಿದೆ ಎಂದು ಅವರು ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ.

ಬೆಸ್ಕಾಂ ಲಾಭದ ಬಗ್ಗೆ ಇಂಧನ ಸಚಿವ ಕೆಜೆ ಹೇಳಿದ್ದೇನು?

ಬೆಸ್ಕಾಂ ಲಾಭ ಗಳಿಸುವ ಹಂತಕ್ಕೆ ಬರಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ತಾವು ಇಂಧನ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ಬೆಸ್ಕಾಂ ತೀವ್ರ ಆರ್ಥಿಕ ಒತ್ತಡದಲ್ಲಿತ್ತು. ಹಣಕಾಸು ಶಿಸ್ತು ತರಲು ಎಲ್ಲ ಹಂತಗಳಲ್ಲೂ ಕ್ರಮ ಕೈಗೊಳ್ಳಲಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಒಗ್ಗಟ್ಟಿನ ಪ್ರಯತ್ನದಿಂದ ಈ ಬದಲಾವಣೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಬೆಸ್ಕಾಂನ ಒಟ್ಟು ಸಂಚಿತ ನಷ್ಟ ಇನ್ನೂ ಸುಮಾರು 13,000 ಕೋಟಿ ರೂಪಾಯಿಯಷ್ಟಿದೆ. ಹೀಗಾಗಿ ಒಂದೇ ವರ್ಷದಲ್ಲಿ ಲಾಭ ದಾಖಲಿಸಿರುವುದರಿಂದ ಸಂಸ್ಥೆಯ ಆರ್ಥಿಕ ಸಂಕಷ್ಟ ಸಂಪೂರ್ಣವಾಗಿ ದೂರವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಚಿತ ನಷ್ಟ ಎಂದರೇನು? ಬೆಸ್ಕಾಂಗೆ ಇದು ಹೇಗೆ ಸಮಸ್ಯೆ ತಂದೊಡ್ಡಲಿದೆ?

ಹಿಂದಿನ ಹಲವು ವರ್ಷಗಳಲ್ಲಿ ಸಂಸ್ಥೆಗೆ ಉಂಟಾದ ಒಟ್ಟು ನಷ್ಟದ ಮೊತ್ತವೇ ಸಂಚಿತ ನಷ್ಟ. ಇದು ಬೆಸ್ಕಾಂನಲ್ಲಿ 13,000 ಕೋಟಿಯಷ್ಟಿದೆ. ಇದರಿಂದ ಹೊರಬರಲು ಬೆಸ್ಕಾಂಗೆ ಹಲವು ವರ್ಷಗಳೇ ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಇಂಧನ ತಜ್ಞ ಹಾಗೂ ಕೆಇಆರ್​ಸಿ ಮಾಜಿ ಸಲಹಾ ಮಂಡಳಿ ಸದಸ್ಯ ಎಂ.ಜಿ. ಪ್ರಭಾಕರ್ ಪ್ರಕಾರ, ಇದು ಬೆಸ್ಕಾಂನ ಆರ್ಥಿಕ ಸ್ಥಿತಿಯಲ್ಲಿ ಆರಂಭಿಕ ಸುಧಾರಣೆಯಷ್ಟೇ. ವರ್ಷಕ್ಕೆ 1,000 ಕೋಟಿ ರೂ. ಲಾಭ ಗಳಿಸಿದರೂ ಸುಮಾರು 13,000 ಕೋಟಿ ರೂ. ಸಂಚಿತ ನಷ್ಟದಿಂದ ಹೊರಬರಲು ಒಂದು ದಶಕಕ್ಕೂ ಹೆಚ್ಚು ಸಮಯ ಬೇಕಾಗಬಹುದು.

LIVE TV

ಇದರ ನಡುವೆ ಹಲವು ಕೈಗಾರಿಕೆಗಳು ಬೆಸ್ಕಾಂನಿಂದ ದೂರ ಸರಿದು ಕ್ಯಾಪ್ಟಿವ್ ಪವರ್ ಹಾಗೂ ಓಪನ್ ಆಕ್ಸೆಸ್ ಆಯ್ಕೆಗಳತ್ತ ಸಾಗುತ್ತಿವೆ. ಹೀಗಾಗಿ ಹೊಸ ಗ್ರಾಹಕರನ್ನು ಸೆಳೆಯುವುದರ ಜೊತೆಗೆ ಈಗಿರುವ ಗ್ರಾಹಕರನ್ನು ಉಳಿಸಿಕೊಳ್ಳುವುದು ಬೆಸ್ಕಾಂಗೆ ಅತ್ಯಂತ ಮುಖ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ