ಬಾಕಿ ಹಣ ವಾಪಸ್ ಮಾಡಿ: ಬಾಂಗ್ಲಾದೇಶಕ್ಕೆ ಅದಾನಿ ಎಚ್ಚರಿಕೆ; ಬಾಕಿ ಉಳಿದಿರುವ ಹಣ 4,200 ಕೋಟಿ ರೂ

Bangladesh owes Adani more than Rs 6,700 crores: ಬಾಂಗ್ಲಾದೇಶ ವಿದ್ಯುತ್ ಬಿಕ್ಕಟ್ಟಿನಿಂದ ಪರದಾಡುತ್ತಿದೆ. ಈ ಕ್ಷೇತ್ರದಲ್ಲಿ 31,000 ಕೋಟಿ ರೂ ಸಾಲ ಬಾಕಿ ಉಳಿಸಿಕೊಂಡಿದೆ. ಈ ಪೈಕಿ ಅದಾನಿ ಕಂಪನಿಗೆ 6,700 ಕೋಟಿ ರೂ ಕೊಡಬೇಕು. ಈಗ ಗಡುವು ಮುಗಿದರೂ ಅದಾನಿ ಪವರ್​ಗೆ ಬಾಂಗ್ಲಾ ಬಾಕಿ ಉಳಿಸಿಕೊಂಡಿರುವ ಹಣ 4,100 ಕೋಟಿ ರೂಗೂ ಹೆಚ್ಚು. ಈ ಹಣವನ್ನು ನೀಡಬೇಕು ಎಂದು ಅದಾನಿ ಗ್ರೂಪ್ ಬಾಂಗ್ಲಾದೇಶ ಸರ್ಕಾರಕ್ಕೆ ಆಗ್ರಹಿಸಿದೆ.

ಬಾಕಿ ಹಣ ವಾಪಸ್ ಮಾಡಿ: ಬಾಂಗ್ಲಾದೇಶಕ್ಕೆ ಅದಾನಿ ಎಚ್ಚರಿಕೆ; ಬಾಕಿ ಉಳಿದಿರುವ ಹಣ 4,200 ಕೋಟಿ ರೂ
ಗೌತಮ್ ಅದಾನಿ
Follow us
|

Updated on: Sep 09, 2024 | 3:34 PM

ನವದೆಹಲಿ, ಸೆಪ್ಟೆಂಬರ್ 9: ವಿದ್ಯುತ್ ಸರಬರಾಜು ಹಣ ನೀಡದೇ ಸಾಕಷ್ಟು ಬಾಕಿ ಉಳಿಸಿಕೊಂಡಿರುವ ಬಾಂಗ್ಲಾದೇಶ ಸರ್ಕಾರಕ್ಕೆ ಅದಾನಿ ಗ್ರೂಪ್ ಎಚ್ಚರಿಕೆ ನೀಡಿದೆ. ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ ಅದಾನಿ ಗ್ರೂಪ್​ಗೆ ಬಾಂಗ್ಲಾದೇಶ ಕೊಡಬೇಕಿರುವ ಬಾಕಿ ಹಣ 500 ಮಿಲಿಯನ್ ಡಾಲರ್ ಎನ್ನಲಾಗಿದೆ. ಅಂದರೆ ಸುಮಾರು 4,200 ಕೋಟಿ ರೂನಷ್ಟು ಹಣವನ್ನು ಬಾಕಿ ಉಳಿಸಿಕೊಂಡಿದೆ. ಜಾರ್ಖಂಡ್​ನ ಗೋಡ್ಡಾದಲ್ಲಿರುವ ವಿದ್ಯುತ್ ಘಟಕದಿಂದ ಬಾಂಗ್ಲಾದೇಶಕ್ಕೆ ಸರಬರಾಜು ಮಾಡಲಾದ ವಿದ್ಯುತ್​ಗೆ ಬಾಂಗ್ಲಾದೇಶ ಬಾಕಿ ಉಳಿಸಿಕೊಂಡಿರುವ ಪಾವತಿ ಮೊತ್ತ ಇಷ್ಟು.

ಶೇಖ್ ಹಸೀನಾ ಸರ್ಕಾರ ಪತನಗೊಂಡು ಈಗ ಹಂಗಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನೊಬೆಲ್ ವಿಜೇತ ಆರ್ಥಿಕ ತಜ್ಞ ಮೊಹಮ್ಮದ್ ಯೂನುಸ್ ನೇತೃತ್ವದ ಹಂಗಾಮಿ ಸರ್ಕಾರ ಅದಾನಿ ಗ್ರೂಪ್ ಜೊತೆಗೆ ಹಿಂದಿನ ಸರ್ಕಾರ ಮಾಡಿಕೊಂಡ ವಿದ್ಯುತ್ ಸರಬರಾಜು ಒಪ್ಪಂದ ತೀರಾ ದುಬಾರಿಯಾಗಿತ್ತು ಎಂದು ವಾದಿಸುತ್ತಿದೆ. ಆದರೆ, ಹಣಕಾಸು ಒತ್ತಡದ ಮಧ್ಯೆಯೂ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡಿದ್ದೇವೆ ಎಂದು ಅದಾನಿ ಪವರ್ ಸಂಸ್ಥೆ ಹೇಳುತ್ತಿದೆ.

ಇದನ್ನೂ ಓದಿ: ಡಿಗ್ರಿ ಪಾಸಾದವರಿಗೆ ಬ್ಯಾಂಕ್​ಗಳಲ್ಲಿ ಅಪ್ರೆಂಟಿಸ್​ಶಿಪ್; ಒಂದು ವರ್ಷ ಸ್ಟೈಪೆಂಡ್; ಇನ್ನೊಂದು ತಿಂಗಳಲ್ಲಿ ಸ್ಕೀಮ್ ಜಾರಿ ಸಾಧ್ಯತೆ

‘ಬಾಂಗ್ಲಾದೇಶ ಸರ್ಕಾರದ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ನಮಗೆ ಬಾಕಿ ಹಣ ಬರಬೇಕಿದ್ದರೂ ನಮ್ಮ ಸರಬರಾಜುದಾರರು, ಹೂಡಿಕೆದಾರರಿಗೆ ಪಾವತಿ ನಿಲ್ಲಿಸಿಲ್ಲ. ಇದೇ ವೇಳೆ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಬದ್ಧತೆಯನ್ನೂ ಬಿಟ್ಟಿಲ್ಲ. ಇಂಥ ಒಂದು ಇಕ್ಕಟ್ಟಿನ ಪರಿಸ್ಥಿತಿ ಬಗ್ಗೆ ಬಾಂಗ್ಲಾ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತಲೇ ಇದ್ದೇವೆ’ ಎಂದು ಅದಾನಿ ಗ್ರೂಪ್​ನ ಈ ಸಂಸ್ಥೆ ತಿಳಿಸಿದೆ.

ಬಾಂಗ್ಲಾದೇಶ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವೇಗವಾಗಿ ಬೆಳವಣಿಗೆ ಹೊಂದಿದೆ. ಆದರೆ, ವಿದ್ಯುತ್ ಮತ್ತು ಇಂಧನ ಕೊರತೆ ಮಾತ್ರ ಬಾಂಗ್ಲಾಗೆ ಮಗ್ಗುಲ ಮುಳ್ಳಾಗಿ ಮುಂದುವರಿದಿದೆ. ವಿದ್ಯುತ್ ಸಂಬಂಧ ಬಾಂಗ್ಲಾದೇಶ ಬಾಕಿ ಉಳಿಸಿಕೊಂಡಿರುವ ಪಾವತಿ ಹಣ 3.7 ಬಿಲಿಯನ್ ಡಾಲರ್. ಸುಮಾರು 31,000 ಕೋಟಿ ರೂನಷ್ಟು ಬಾಕಿ ಇದೆ. ಇದರಲ್ಲಿ 6,700 ಕೋಟಿ ರೂನಷ್ಟು ಹಣ ಅದಾನಿ ಪವರ್​ಗೆ ಕೊಡಬೇಕಿದೆ. ಈ ಪೈಕಿ ಸದ್ಯಕ್ಕೆ ಪಾವತಿಸಲು ಗಡುವು ಮುಗಿದಿರುವ ಹಣ 4,130 ಕೋಟಿ ರೂ ಎನ್ನಲಾಗಿದೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಪಾಲಿಸಿ: ನಿಮ್ಮ ಕ್ಲೇಮ್ ರಿಜೆಕ್ಟ್ ಆಗುತ್ತಿದೆಯಾ? ಇಲ್ಲಿವೆ 5 ಕಾರಣಗಳು

ಶೇಖ್ ಹಸೀನಾ ಸರ್ಕಾರ ಇದ್ದಾಗ ಸರಿಯಾದ ರೀತಿಯಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆದಿಲ್ಲ. ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ. ಹೀಗಾಗಿ, ದುಬಾರಿ ಬೆಲೆಗೆ ವಿದ್ಯುತ್ ಪೂರೈಕೆ ಒಪ್ಪಂದ ಆಗಿದೆ ಎಂದು ಈಗಿನ ಹಂಗಾಮಿ ಸರ್ಕಾರ ಹೇಳುತ್ತಿದೆ. ಅಷ್ಟೇ ಅಲ್ಲ, ಹಿಂದಿನ ವಿದ್ಯುತ್ ಒಪ್ಪಂದಗಳನ್ನು ಮತ್ತೆ ಮರು ಅವಲೋಕಿಸಿ, ಹೊಸ ಬೆಲೆ ನಿಗದಿ ಮಾಡುವ ಕುರಿತು ಸರ್ಕಾರ ಆಲೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ