AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕಿ ಹಣ ವಾಪಸ್ ಮಾಡಿ: ಬಾಂಗ್ಲಾದೇಶಕ್ಕೆ ಅದಾನಿ ಎಚ್ಚರಿಕೆ; ಬಾಕಿ ಉಳಿದಿರುವ ಹಣ 4,200 ಕೋಟಿ ರೂ

Bangladesh owes Adani more than Rs 6,700 crores: ಬಾಂಗ್ಲಾದೇಶ ವಿದ್ಯುತ್ ಬಿಕ್ಕಟ್ಟಿನಿಂದ ಪರದಾಡುತ್ತಿದೆ. ಈ ಕ್ಷೇತ್ರದಲ್ಲಿ 31,000 ಕೋಟಿ ರೂ ಸಾಲ ಬಾಕಿ ಉಳಿಸಿಕೊಂಡಿದೆ. ಈ ಪೈಕಿ ಅದಾನಿ ಕಂಪನಿಗೆ 6,700 ಕೋಟಿ ರೂ ಕೊಡಬೇಕು. ಈಗ ಗಡುವು ಮುಗಿದರೂ ಅದಾನಿ ಪವರ್​ಗೆ ಬಾಂಗ್ಲಾ ಬಾಕಿ ಉಳಿಸಿಕೊಂಡಿರುವ ಹಣ 4,100 ಕೋಟಿ ರೂಗೂ ಹೆಚ್ಚು. ಈ ಹಣವನ್ನು ನೀಡಬೇಕು ಎಂದು ಅದಾನಿ ಗ್ರೂಪ್ ಬಾಂಗ್ಲಾದೇಶ ಸರ್ಕಾರಕ್ಕೆ ಆಗ್ರಹಿಸಿದೆ.

ಬಾಕಿ ಹಣ ವಾಪಸ್ ಮಾಡಿ: ಬಾಂಗ್ಲಾದೇಶಕ್ಕೆ ಅದಾನಿ ಎಚ್ಚರಿಕೆ; ಬಾಕಿ ಉಳಿದಿರುವ ಹಣ 4,200 ಕೋಟಿ ರೂ
ಗೌತಮ್ ಅದಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 09, 2024 | 3:34 PM

Share

ನವದೆಹಲಿ, ಸೆಪ್ಟೆಂಬರ್ 9: ವಿದ್ಯುತ್ ಸರಬರಾಜು ಹಣ ನೀಡದೇ ಸಾಕಷ್ಟು ಬಾಕಿ ಉಳಿಸಿಕೊಂಡಿರುವ ಬಾಂಗ್ಲಾದೇಶ ಸರ್ಕಾರಕ್ಕೆ ಅದಾನಿ ಗ್ರೂಪ್ ಎಚ್ಚರಿಕೆ ನೀಡಿದೆ. ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ ಅದಾನಿ ಗ್ರೂಪ್​ಗೆ ಬಾಂಗ್ಲಾದೇಶ ಕೊಡಬೇಕಿರುವ ಬಾಕಿ ಹಣ 500 ಮಿಲಿಯನ್ ಡಾಲರ್ ಎನ್ನಲಾಗಿದೆ. ಅಂದರೆ ಸುಮಾರು 4,200 ಕೋಟಿ ರೂನಷ್ಟು ಹಣವನ್ನು ಬಾಕಿ ಉಳಿಸಿಕೊಂಡಿದೆ. ಜಾರ್ಖಂಡ್​ನ ಗೋಡ್ಡಾದಲ್ಲಿರುವ ವಿದ್ಯುತ್ ಘಟಕದಿಂದ ಬಾಂಗ್ಲಾದೇಶಕ್ಕೆ ಸರಬರಾಜು ಮಾಡಲಾದ ವಿದ್ಯುತ್​ಗೆ ಬಾಂಗ್ಲಾದೇಶ ಬಾಕಿ ಉಳಿಸಿಕೊಂಡಿರುವ ಪಾವತಿ ಮೊತ್ತ ಇಷ್ಟು.

ಶೇಖ್ ಹಸೀನಾ ಸರ್ಕಾರ ಪತನಗೊಂಡು ಈಗ ಹಂಗಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನೊಬೆಲ್ ವಿಜೇತ ಆರ್ಥಿಕ ತಜ್ಞ ಮೊಹಮ್ಮದ್ ಯೂನುಸ್ ನೇತೃತ್ವದ ಹಂಗಾಮಿ ಸರ್ಕಾರ ಅದಾನಿ ಗ್ರೂಪ್ ಜೊತೆಗೆ ಹಿಂದಿನ ಸರ್ಕಾರ ಮಾಡಿಕೊಂಡ ವಿದ್ಯುತ್ ಸರಬರಾಜು ಒಪ್ಪಂದ ತೀರಾ ದುಬಾರಿಯಾಗಿತ್ತು ಎಂದು ವಾದಿಸುತ್ತಿದೆ. ಆದರೆ, ಹಣಕಾಸು ಒತ್ತಡದ ಮಧ್ಯೆಯೂ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡಿದ್ದೇವೆ ಎಂದು ಅದಾನಿ ಪವರ್ ಸಂಸ್ಥೆ ಹೇಳುತ್ತಿದೆ.

ಇದನ್ನೂ ಓದಿ: ಡಿಗ್ರಿ ಪಾಸಾದವರಿಗೆ ಬ್ಯಾಂಕ್​ಗಳಲ್ಲಿ ಅಪ್ರೆಂಟಿಸ್​ಶಿಪ್; ಒಂದು ವರ್ಷ ಸ್ಟೈಪೆಂಡ್; ಇನ್ನೊಂದು ತಿಂಗಳಲ್ಲಿ ಸ್ಕೀಮ್ ಜಾರಿ ಸಾಧ್ಯತೆ

‘ಬಾಂಗ್ಲಾದೇಶ ಸರ್ಕಾರದ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ನಮಗೆ ಬಾಕಿ ಹಣ ಬರಬೇಕಿದ್ದರೂ ನಮ್ಮ ಸರಬರಾಜುದಾರರು, ಹೂಡಿಕೆದಾರರಿಗೆ ಪಾವತಿ ನಿಲ್ಲಿಸಿಲ್ಲ. ಇದೇ ವೇಳೆ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಬದ್ಧತೆಯನ್ನೂ ಬಿಟ್ಟಿಲ್ಲ. ಇಂಥ ಒಂದು ಇಕ್ಕಟ್ಟಿನ ಪರಿಸ್ಥಿತಿ ಬಗ್ಗೆ ಬಾಂಗ್ಲಾ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತಲೇ ಇದ್ದೇವೆ’ ಎಂದು ಅದಾನಿ ಗ್ರೂಪ್​ನ ಈ ಸಂಸ್ಥೆ ತಿಳಿಸಿದೆ.

ಬಾಂಗ್ಲಾದೇಶ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವೇಗವಾಗಿ ಬೆಳವಣಿಗೆ ಹೊಂದಿದೆ. ಆದರೆ, ವಿದ್ಯುತ್ ಮತ್ತು ಇಂಧನ ಕೊರತೆ ಮಾತ್ರ ಬಾಂಗ್ಲಾಗೆ ಮಗ್ಗುಲ ಮುಳ್ಳಾಗಿ ಮುಂದುವರಿದಿದೆ. ವಿದ್ಯುತ್ ಸಂಬಂಧ ಬಾಂಗ್ಲಾದೇಶ ಬಾಕಿ ಉಳಿಸಿಕೊಂಡಿರುವ ಪಾವತಿ ಹಣ 3.7 ಬಿಲಿಯನ್ ಡಾಲರ್. ಸುಮಾರು 31,000 ಕೋಟಿ ರೂನಷ್ಟು ಬಾಕಿ ಇದೆ. ಇದರಲ್ಲಿ 6,700 ಕೋಟಿ ರೂನಷ್ಟು ಹಣ ಅದಾನಿ ಪವರ್​ಗೆ ಕೊಡಬೇಕಿದೆ. ಈ ಪೈಕಿ ಸದ್ಯಕ್ಕೆ ಪಾವತಿಸಲು ಗಡುವು ಮುಗಿದಿರುವ ಹಣ 4,130 ಕೋಟಿ ರೂ ಎನ್ನಲಾಗಿದೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಪಾಲಿಸಿ: ನಿಮ್ಮ ಕ್ಲೇಮ್ ರಿಜೆಕ್ಟ್ ಆಗುತ್ತಿದೆಯಾ? ಇಲ್ಲಿವೆ 5 ಕಾರಣಗಳು

ಶೇಖ್ ಹಸೀನಾ ಸರ್ಕಾರ ಇದ್ದಾಗ ಸರಿಯಾದ ರೀತಿಯಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆದಿಲ್ಲ. ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ. ಹೀಗಾಗಿ, ದುಬಾರಿ ಬೆಲೆಗೆ ವಿದ್ಯುತ್ ಪೂರೈಕೆ ಒಪ್ಪಂದ ಆಗಿದೆ ಎಂದು ಈಗಿನ ಹಂಗಾಮಿ ಸರ್ಕಾರ ಹೇಳುತ್ತಿದೆ. ಅಷ್ಟೇ ಅಲ್ಲ, ಹಿಂದಿನ ವಿದ್ಯುತ್ ಒಪ್ಪಂದಗಳನ್ನು ಮತ್ತೆ ಮರು ಅವಲೋಕಿಸಿ, ಹೊಸ ಬೆಲೆ ನಿಗದಿ ಮಾಡುವ ಕುರಿತು ಸರ್ಕಾರ ಆಲೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ