WATER CRISIS in India: ಗಂಭೀರ ಎಚ್ಚರಿಕೆ! ಉದ್ಭವಿಸಲಿದೆ ನೀರನ್ನು ಸ್ಟಾಕ್ ಮಾರ್ಕೆಟ್ನಲ್ಲಿ ಸರಕಾಗಿಸಿ ಟ್ರೇಡಿಂಗ್ ಮಾಡುವ ಪರಿಸ್ಥಿತಿ
ಒಂದು ಕಾಲದಲ್ಲಿ ನಾಗರಿಕತೆ ಪ್ರಾರಂಭವಾಗಿದ್ದೇ ನದಿ ದಡದಲ್ಲಿ. ಈಗಲೂ ವಿಶ್ವ ಜನಸಂಖ್ಯೆಯ ಶೇ 80 ರಷ್ಟು ಜನರು 10,000 ಕ್ಕೂ ಹೆಚ್ಚು ನದಿ ಜಲಾನಯನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದು ಗಮನಾರ್ಹ. ನೀರಿನ ಅಗತ್ಯ ಮತ್ತು ಅದರ ಮೌಲ್ಯವನ್ನು ಅರಿತು ನದಿಯ ಬಳಿಯೇ ವಾಸಿಸುವುದನ್ನು ಮನುಷ್ಯ ರೂಢಿ ಮಾಡಿಕೊಂಡ. ಉದಾಹರಣೆಗೆ ಹೇಳುವುದಾದರೆ ಹೈದರಾಬಾದ್ ಮಹಾನಗರವೂ ಮೌಸಿ ನದಿ ದಡದಲ್ಲಿಯೇ ನಿರ್ಮಾಣವಾಗಿರುವುದು. ಅದೊಮ್ಮೆ ಇಡೀ ನಗರಕ್ಕೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದ ಮೌಸಿ ನದಿಯನ್ನು ಈಗ ಮೂಸಿ ನೋಡಲೂ ಆಗದು.

ಸ್ವಲ್ಪ ಮುಖ ತೊಳೆದುಕೊಂಡು ಬಾ ಅಂದರೆ ಸಾಕು ಅದಕ್ಕಾಗಿ ಒಂದೆರಡು ಚೊಂಬು ನೀರು ಬಳಸುವವರು ಇದ್ದಾರೆ. ಇನ್ನು ಸ್ವಚ್ಛವಾಗಿ ಕೈ ಕಾಲು ತೊಳೆಯಲು ಇಡೀ ಬಕೆಟ್ ನೀರು ವ್ಯರ್ಥ ಮತ್ತು ಸ್ನಾನ ಮಾಡಿ ಬಾ ಎಂದು ಹೇಳಿದರೆ ಸಾಕು.. ಎರಡ್ಮೂರು ಬಕೆಟ್ ಬಳಸಿದರೂ ಅವರಿಗೆ ಏನೂ ಅನ್ನಿಸುವುದಿಲ್ಲ. ಹಾಗೆ ನೀರನ್ನು ಪೋಲು ಮಾಡುತ್ತಿದ್ದಾರೆ. ಆದರೆ ಹೀಗೆ ನೀರು ಪೋಲು ಮಾಡುವುದನ್ನು ಸಹಿಸಲಾಗದವರು. ನೀರನ್ನು ಹಿತ ಮಿತವಾಗಿ ಬಳಸುವವರಂತೂ ನೀರು ಪೋಲು ಮಾಡುವವರನ್ನು ಮರುಭೂಮಿಗೆ ಎಸೆದು ಬರಬೇಕು ಎಂದು ಯೋಚಿಸುತ್ತಾರೆ. ಆದರೆ ಅವರು ಹಾಗೆ ಯೋಚಿಸುತ್ತಿರಲಿ ಅಥವಾ ಇಲ್ಲದಿರಲಿ ನೀರಿನ ಲಭ್ಯತೆಯ ಬಗ್ಗೆ ಹಲವಾರು ಕಠಿಣ ವಾಸ್ತವ ಸಂಗತಿಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ. ವೈಜ್ಞಾನಿಕವಾಗಿ ನೀರನ್ನು H2O ಎಂದು ಕರೆಯಲಾಗುತ್ತದೆ. ಅದೇ ನೀರನ್ನು ಜೀವಜಲ, ಅಮೃತ ಎಂದು ಕರೆಯವುದೂ ಉಂಟು. ಎರಡು ಹೈಡ್ರೋಜನ್ ಪರಮಾಣುಗಳು ಮತ್ತು ಒಂದು ಆಮ್ಲಜನಕ ಪರಮಾಣು ಸೇರಿ ನೀರನ್ನು ರೂಪಿಸುತ್ತದೆ. ಹಾಗಾದರೆ ಅಂತಹ ವಿಧಾನದಲ್ಲಿ ಭಾರೀ ಪ್ರಮಾಣದಲ್ಲಿ ನಮಗೇಕೆ ನೀರನ್ನು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ವಾತಾವರಣದಲ್ಲಿ ಸಾಕಷ್ಟು ಹೈಡ್ರೋಜನ್ ಮತ್ತು ಸಾಕಷ್ಟು ಆಮ್ಲಜನಕವಿದೆ. ಇದಲ್ಲದೆ, ನಾವು ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲಿದ್ದೇವೆ. ಆದರೂ ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲವೇ? ಯಸ್ ನೀರನ್ನು ಹಾಗೆಲ್ಲಾ ಸಾಧ್ಯವಿಲ್ಲ ದೊಡ್ಡ ಪ್ರಯೋಗಾಲಯಗಳಲ್ಲಿ ಹೈಡ್ರೋಜನ್ ಮತ್ತು ಆಮ್ಲಜನಕದ ಅಣುಗಳನ್ನು ಒಟ್ಟಿಗೆ ಸೇರಿಸಿದರೂ, ಸಾಕಷ್ಟು ನೀರನ್ನು ತಯಾರಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರಯೋಗಾಲಯದಲ್ಲಿ ಒಂದು ಹನಿ ನೀರು ಮಾಡಲು ಕನಿಷ್ಠ 10 ಗಂಟೆಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಅದು ಸಾಕಷ್ಟು ಶಾಖವನ್ನು ಉಂಟುಮಾಡುತ್ತದೆಯೋ...
Published On - 7:27 pm, Sat, 15 June 24




