AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುತ್ತೂರು, ಆದಿಚುಂಚನಗಿರಿ ಮಠಕ್ಕೆ ಅನರ್ಹ ತ್ರಿಮೂರ್ತಿಗಳು ದೌಡು!

ಬೆಂಗಳೂರು: ಅನರ್ಹ ಶಾಸಕರು ಬಿಜೆಪಿ ಅಭ್ಯರ್ಥಿಗಳಾಗುತ್ತಿದ್ದಂತೆಯೇ ಪ್ರಮುಖ ಮಠಗಳತ್ತ ದೌಡಾಯಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮುನ್ನ ಅನರ್ಹ ಶಾಸಕರಾದ ಎಸ್. ಟಿ. ಸೋಮಶೇಖರ್ ಮತ್ತು ಭೈರತಿ ಬಸವರಾಜ್ ಸುತ್ತೂರು ಮಠ ಮತ್ತು ಆದಿಚುಂಚನಗಿರಿ ಮಠಗಳಿಗೆ ಇಂದು ಬೆಳಗ್ಗೆ ಭೇಟಿ ನೀಡಿ, ಪೀಠಾಧ್ಯಕ್ಷರ ಆಶೀರ್ವಚನ ಪಡೆದರು. ಅವರಿಗೆ ರಾಜರಾಜೇಶ್ವರಿ ನಗರ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಸಾಥ್​ ನೀಡಿದ್ದಾರೆ. ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮಶೇಖರ್ ಮತ್ತು ಕೆ.ಆರ್. ಪುರಂ ಅಭ್ಯರ್ಥಿಯಾಗಿ ಭೈರತಿ ಬಸವರಾಜ್ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ. ಸುತ್ತೂರು […]

ಸುತ್ತೂರು, ಆದಿಚುಂಚನಗಿರಿ ಮಠಕ್ಕೆ ಅನರ್ಹ ತ್ರಿಮೂರ್ತಿಗಳು ದೌಡು!
ಸಾಧು ಶ್ರೀನಾಥ್​
|

Updated on:Nov 16, 2019 | 2:40 PM

Share

ಬೆಂಗಳೂರು: ಅನರ್ಹ ಶಾಸಕರು ಬಿಜೆಪಿ ಅಭ್ಯರ್ಥಿಗಳಾಗುತ್ತಿದ್ದಂತೆಯೇ ಪ್ರಮುಖ ಮಠಗಳತ್ತ ದೌಡಾಯಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮುನ್ನ ಅನರ್ಹ ಶಾಸಕರಾದ ಎಸ್. ಟಿ. ಸೋಮಶೇಖರ್ ಮತ್ತು ಭೈರತಿ ಬಸವರಾಜ್ ಸುತ್ತೂರು ಮಠ ಮತ್ತು ಆದಿಚುಂಚನಗಿರಿ ಮಠಗಳಿಗೆ ಇಂದು ಬೆಳಗ್ಗೆ ಭೇಟಿ ನೀಡಿ, ಪೀಠಾಧ್ಯಕ್ಷರ ಆಶೀರ್ವಚನ ಪಡೆದರು.

ಅವರಿಗೆ ರಾಜರಾಜೇಶ್ವರಿ ನಗರ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಸಾಥ್​ ನೀಡಿದ್ದಾರೆ. ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮಶೇಖರ್ ಮತ್ತು ಕೆ.ಆರ್. ಪುರಂ ಅಭ್ಯರ್ಥಿಯಾಗಿ ಭೈರತಿ ಬಸವರಾಜ್ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ.

ಸುತ್ತೂರು ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಈ ರಾಜಕೀಯ ನಾಯಕರಿಗೆ ಆಶೀರ್ವಚನ ನೀಡಿದರು.

Published On - 2:25 pm, Sat, 16 November 19