ತುಂಗಭದ್ರಾ ಜಲಾಶಯ ಭರ್ತಿ; ಭತ್ತ ಬೆಳೆಯುವ ರೈತರಲ್ಲಿ ಮಂದಹಾಸ, ಕಣಜ ಖ್ಯಾತಿಯ ಪ್ರದೇಶದಲ್ಲಿ ನಾಟಿ ಶುರು
ರಾಜ್ಯದ ಭತ್ತದ ಕಣಜ ಎಂದು ಕೊಪ್ಪಳ, ರಾಯಚೂರು ಜಿಲ್ಲೆಗಳನ್ನು ಕರೆಯುತ್ತಾರೆ. ಅದರಲ್ಲೂ ತುಂಗಭದ್ರಾ ನದಿ ಪಾತ್ರದಲ್ಲಿ ಬೆಳೆಯುವ ಭತ್ತಕ್ಕೆ ಹೆಚ್ಚಿನ ಡಿಮ್ಯಾಂಡ್ ಇದೆ. ಆದ್ರೆ ಕಳೆದ ಬಾರಿ ತುಂಗಭದ್ರಾ ಜಲಾಶಯ ಬರಿದಾಗಿದ್ದರಿಂದ ರೈತರು ಎರಡನೆ ಬೆಳೆ ಬೆಳೆದಿರಲಿಲ್ಲಾ. ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಬರದೇ ಇದ್ದಿದರಿಂದ ಭತ್ತದ ಬೆಳೆಗಾರರು ಕಂಗಾಲಾಗಿದ್ದರು. ಆದರೆ ಇದೀಗ ತುಂಗಭದ್ರಾ ಡ್ಯಾಂ ತುಂಬುತ್ತಿರುವುದರಿಂದ ಭತ್ತ ಬೆಳೆಗಾರರ ಸಂತಸ ಇಮ್ಮಡಿಯಾಗಿದೆ. ಭತ್ತ ನಾಟಿಗೆ ತಯಾರಿ ಆರಂಭಿಸಿದ್ದಾರೆ.

1 / 7

2 / 7

3 / 7

4 / 7

5 / 7

6 / 7

7 / 7
Follow Us



